ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹರಿಹರ: ಭೀಕರ ಅಪಘಾತ, 6 ಅಯ್ಯಪ್ಪ ಭಕ್ತರ ಸಾವು
ಶಬರಿಮಲೆಯಿಂದ ಹಿಂತಿರುಗುತ್ತಿದ್ದ ಭಕ್ತರು ಐವರು ಸ್ಥಳದಲ್ಲೇ ಮರಣ ಹೊಂದಿದ್ದಾರೆ. ಸುಮಾರು 9 ಜನರಿಗೆ ತೀವ್ರ ಗಾಯಗಳಾಗಿದೆ. ಗಾಯಗೊಂಡವರನ್ನು ಹರಿಹರ ಮತ್ತು ಚಿತ್ರದುರ್ಗದ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಗೊಂಡವರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಲಾರಿ ಮತ್ತು ಕ್ರೂಸರ್ ನಡುವೆ ಡಿಕ್ಕಿ ಸಂಭವಿಸಿದ ಕಾರಣ ಕ್ರೂಸರ್ ನಲ್ಲಿದ್ದ ಮುಧೋಳದ ಒಂಟಿಗೋಡಿ ಮೂಲದ ಅಯ್ಯಪ್ಪ ಭಕ್ತರು ಸಾವನ್ನಪ್ಪಿದ್ದಾರೆ. ಹರಿಹರ ತಾಲೂಕು ರಾಜನಹಳ್ಳಿ ಬಳಿ ಈ ದುರ್ಘಟನೆ ಸಂಭವಿಸಿದ್ದು, ರಾಣಾಕುಸನೂರು ಠಾಣೆಯಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ವ್ಯಾಪ್ತಿಗೆ ಒಳಪಡುತ್ತದೆ.
ಮೃತಪಟ್ಟವರನ್ನು ವಿಠಲ್ ಮಾಧವ್, ತಿಪ್ಪಣ್ಣ, ಮಂಜುನಾಥ, ಸಿದ್ದು ನಾಯಕ, ಲಕ್ಕಪ್ಪಗುದ್ಲಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ರಮೇಶ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments
ರಾಷ್ಟ್ರೀಯ ಹೆದ್ದಾರಿ ಅಪಘಾತ ರಸ್ತೆ ಅಪಘಾತ ಹರಿಹರ ಜಿಲ್ಲಾಸುದ್ದಿ road accident accident national highway district news harihara
English summary
At least 6 passengers have died on spot when a Cruiser vehicle collided with Lorry in the wee hours today(Jan.14). The major accident occurred near Harihara highway near Davangere. Over 9 persons injured are admitted to near by hospitals.
Story first published: Saturday, January 14, 2012, 11:11 [IST]