ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಅಸಾಧ್ಯ!

ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಸಂಪೂರ್ಣ ಮದ್ಯಪಾನ ನಿಷೇಧಗೊಳಿಸಿ ಎಂದು ಮುರುಘಾ ಮಠದ ಶಿವಮೂರ್ತಿ ಶರಣರು ಸರ್ಕಾರಕ್ಕೆ ಆಗ್ರಹಿಸಿದ್ದರು. ಈ ಬಗ್ಗೆ ಮಠಾಧಿಪತಿಗಳ ದುಂಡು ಮೇಜಿನ ಪರಿಷತ್ ನಲ್ಲಿ ಒಕ್ಕೊರಲ ಬೆಂಬಲ ಕೂಡಾ ಸಿಕ್ಕಿತು.
ಆದರೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸದಾನಂದ ಗೌಡ, ಮದ್ಯಪಾನ ನಿಷೇಧಕ್ಕೆ ನಿರಾಕರಿಸಿದ್ದಾರೆ. ಸರ್ಕಾರ ಮೊದಲು ಸರಾಯಿ ನಿಷೇಧಿಸಿತು.ಆದರೆ, ಕಳ್ಳಭಟ್ಟಿ ದಂಧೆ ಹತ್ತಿಕ್ಕಲು ಇನ್ನೂ ಸಾಧ್ಯವಾಗಿಲ್ಲ.
ಅಬಕಾರಿ ಇಲಾಖೆಗೆ ಪ್ರತಿ ವರ್ಷ ಶೇ .20ರಷ್ಟು ಅಧಿಕ ಆದಾಯ ಬರುತ್ತಿರುವುದು ನಿಜ ಎಂದು ಸದಾನಂದ ಗೌಡರು ಹೇಳಿದರು. ಮದ್ಯವ್ಯಸನದ ಬಗ್ಗೆ ಜನಜಾಗೃತಿ ಮೂಡಿಸಬೇಕು. ಜನರಿಗೆ ಮದ್ಯಪಾನದ ದುಷ್ಪರಿಣಾಮದ ಅರಿವು ಮೂಡಿದರೆ, ನಂತರ ನಿಷೇಧದ ಬಗ್ಗೆ ಯೋಚಿಸಬಹುದು ಎಂದರು.












Click it and Unblock the Notifications