ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಅಸಾಧ್ಯ!

By Mahesh
|
Google Oneindia Kannada News

DV Sadananda gowda
ಬೆಂಗಳೂರು, ಜ.12: ರಾಜ್ಯದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧ ಅಸಾಧ್ಯ. ಹಂತ ಹಂತವಾಗಿ ನಿರ್ಬಂಧಿಸಬಹುದು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನಿಷೇಧ ಖಂದಿತ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ.

ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಸಂಪೂರ್ಣ ಮದ್ಯಪಾನ ನಿಷೇಧಗೊಳಿಸಿ ಎಂದು ಮುರುಘಾ ಮಠದ ಶಿವಮೂರ್ತಿ ಶರಣರು ಸರ್ಕಾರಕ್ಕೆ ಆಗ್ರಹಿಸಿದ್ದರು. ಈ ಬಗ್ಗೆ ಮಠಾಧಿಪತಿಗಳ ದುಂಡು ಮೇಜಿನ ಪರಿಷತ್ ನಲ್ಲಿ ಒಕ್ಕೊರಲ ಬೆಂಬಲ ಕೂಡಾ ಸಿಕ್ಕಿತು.

ಆದರೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸದಾನಂದ ಗೌಡ, ಮದ್ಯಪಾನ ನಿಷೇಧಕ್ಕೆ ನಿರಾಕರಿಸಿದ್ದಾರೆ. ಸರ್ಕಾರ ಮೊದಲು ಸರಾಯಿ ನಿಷೇಧಿಸಿತು.ಆದರೆ, ಕಳ್ಳಭಟ್ಟಿ ದಂಧೆ ಹತ್ತಿಕ್ಕಲು ಇನ್ನೂ ಸಾಧ್ಯವಾಗಿಲ್ಲ.

ಅಬಕಾರಿ ಇಲಾಖೆಗೆ ಪ್ರತಿ ವರ್ಷ ಶೇ .20ರಷ್ಟು ಅಧಿಕ ಆದಾಯ ಬರುತ್ತಿರುವುದು ನಿಜ ಎಂದು ಸದಾನಂದ ಗೌಡರು ಹೇಳಿದರು. ಮದ್ಯವ್ಯಸನದ ಬಗ್ಗೆ ಜನಜಾಗೃತಿ ಮೂಡಿಸಬೇಕು. ಜನರಿಗೆ ಮದ್ಯಪಾನದ ದುಷ್ಪರಿಣಾಮದ ಅರಿವು ಮೂಡಿದರೆ, ನಂತರ ನಿಷೇಧದ ಬಗ್ಗೆ ಯೋಚಿಸಬಹುದು ಎಂದರು.

English summary
People need to kick the Drinking habit voluntarily, a complete liquor prohibition in Karnataka is not possible. It is happy to see religious leaders are against alcoholism. Karnataka State Temperance Board should create more awareness on its ill-effects said CM DV Sadananda Gowda in a a round table meeting of religious leaders against alcoholism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X