ಟಿವಿ9ಗೆ 3ನೇ ಬಾರಿ ಪ್ರತಿಷ್ಠಿತ ರಾಮನಾಥ್ ಗೋಯೆಂಕಾ ಪ್ರಶಸ್ತಿ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಕಟ್ಟಾ ಬ್ರಹ್ಮಚಾರಿ ಹನುಮಂತ ದೇವರ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿ, ಅದರ ಕುರಿತು 'ಹನುಮನ ಹೆಂಡಿರು' ಎಂಬ ವರದಿಗಾಗಿ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಈ ಪ್ರಶಸ್ತಿ ಸಂದಿದೆ.
ಈ ಅನಿಷ್ಟ ದೇವದಾಸಿ ಪದ್ಧತಿ ಕುರಿತು ಸರಕಾರ ಮತ್ತು ಸಮಾಜ ಎತ್ತೆತ್ತುಕೊಳ್ಳುವಂತೆ ವರದಿ ಮಾಡಿದ್ದ ಹುಬ್ಬಳ್ಳಿಯ ವರದಿಗಾರ ಪ್ರಕಾಶ್ ನೂಲ್ವಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಿಗೆ ಅಭಿನಂದನೆಗಳು.
ನವದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್ನಲ್ಲಿ ಜ.16ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ವರದಿಗಾರಿಕೆ ಮಾಡುವಾಗ ತೋರುವ ಧೈರ್ಯ, ನಿಷ್ಪಕ್ಷಪಾತ, ನೇರವಂತಿಕೆ, ನಿಖರತೆಯನ್ನು ಅಳೆದು ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ, ಮುದ್ರಣ ಅಥವಾ ಎಲೆಕ್ಟ್ರಾನಿಕ್ ವಿಭಾಗಗಳಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು.












Click it and Unblock the Notifications