ಉಡುಪಿಯಲ್ಲಿ ಉಳಿದಿರುವುದು ಏಳು ಮಠ ಮಾತ್ರ!

ಪುತ್ತಿಗೆ ಮಠಾಧೀಶ ಸುಗುಣೇಂದ್ರರೇ ಈ ಬಾರಿಯ ಪರ್ಯಾಯ ಉತ್ಸವದಲ್ಲಿ ಸಪ್ತ ಮಠಾಧೀಶರಿಂದ ಬಹಿಷ್ಕರಿಸಲ್ಪಟ್ಟವರು. ಅವರು ಈ ಹಿಂದೆ ತನ್ನ ಪರ್ಯಾಯ ಅವಧಿಯಲ್ಲಿ ವಿದೇಶ ಪ್ರವಾಸ ಕೈಗೊಂಡಿರುವ ಕಾರಣಕ್ಕಾಗಿ ಅವರನ್ನು ಸಪ್ತಮಠಗಳ ತೀರ್ಥರು ವಿರೋಧಿಸುತ್ತ ಬಂದಿದ್ದಾರೆ.
ಅಂದಿನ ಭಿನ್ನಾಬಿಪ್ರಾಯ ಇನ್ನೊಂದು ಪರ್ಯಾಯೋತ್ಸವದಲ್ಲಿ ಸ್ಫೋಟಗೊಂಡಿದೆ. ಪುತ್ತಿಗೆ ಶ್ರೀಗಳನ್ನು ಪರ್ಯಾಯದ ದರ್ಬಾರು ಮತ್ತು ಮೆರವಣಿಗೆಯಿಂದ ಬಹಿಷ್ಕರಿಸಿ ಆಮಂತ್ರಣ ಪತ್ರಿಕೆ ಹಂಚಲಾಗಿದೆ.
ಶ್ರೀಕೃಷ್ಣ ಅಷ್ಠಮಠಗಳಲ್ಲಿ ಅಷ್ಠಮಠಗಳ ಶ್ರೀಗಳಿಂದ ನಡೆಯುತ್ತಿರುವ ಸಮಾಜ ಬೋಧನಾ ಕೆಲಸ ಇದೆಂದು ಕೆಲವರು ಕುಹಕವಾಡುವಂತಾಗಿದೆ.
ಹೇಳುವುದು ಶಾಸ್ತ್ರ ಇಕ್ಕುವುದು ಗಾಳ: ಇಂತಹ ಸ್ವಾಮಿಗಳು ಸಮಾಜಕ್ಕೆ ಬೋಧನೆ ಮಾಡಿದರೆಷ್ಟು, ಬಿಟ್ಟರೆಷ್ಟು ? ಹೌದು. ಸಮಾಜವನ್ನು ತಿದ್ದುವ (ಎನ್ನಲಾದ!) ಸ್ವಾಮಿಗಳು ಜನರನ್ನು ಎತ್ತಿ ಕಟ್ಟುವುದಕ್ಕೆ ಇದೂ ಒಂದು ನಿದರ್ಶನವಾಗುತ್ತದೆ.
ಹೇಳುವುದು ಶಾಸ್ತ್ರ ಇಕ್ಕುವುದು ಗಾಳ ಎಂದು ಹೇಳುವುದು ಇದಕ್ಕೆಯೇ ಅಲ್ಲವೇ ? ಹಿಂದೂಗಳು ಒಗ್ಗಟ್ಟಾಗಿರಬೇಕು, ಗೋಹತ್ಯೆ ನಡೆಸಬಾರದು, ಧರ್ಮ ಸಹಿಷ್ಣ g ಆಗಿರಬೇಕು ಎಂದೆಲ್ಲ ಬೋಧನೆ ಮಾಡುವ ಈ ಪೇಜಾವರ ಶ್ರೀ ಇದುವರೆಗೂ ತಮ್ಮ ಮಠದೊಳಗಿನ ಹುಳುಕು ಮತ್ತು ಪುತ್ತಿಗೆ ಶ್ರೀಯನ್ನು ಪರ್ಯಾಯದಿಂದ ಬಹಿಷ್ಕರಿಸಲಾಗಿರುವ ಬಗ್ಗೆ ಆಕ್ಷೇಪ ಎತ್ತಿಲ್ಲ.
ಅಂದರೆ ಅವರಿಗೂ ಅಷ್ಠಮ ಠವು ಸಪ್ತ ಮಠವಾಗುವುದು ಬೇಕಿದೆಯೇ ಎಂಬುದು ನೇರ ಸವಾಲಾಗಿದೆ. ತಮ್ಮ ಮಠದ ಸಮಸ್ಯೆ ಬಗೆಹರಿಸಲು ಮುಂದಾಗದ ಅಥವಾ ಅಂತಹ ಧೈರ್ಯ ತೋರಿಸದ ಪೇಜಾವರಶ್ರಿ ಇತರ ಸಮಸ್ಯೆಗಳನ್ನು ಅದ್ಯಾಗೆ ನಿಭಾಯಿಸುತ್ತಾರೋ ಶ್ರೀಕೃಷ್ಣನೇ ಬಲ್ಲ!
ಇನ್ನು ಸುಗುಣೇಂದ್ರ ತೀರ್ಥರು ವಿದೇಶ ಪ್ರವಾಸ ಕೈಗೊಂಡಿದ್ದರೆ ಅದು ಮಾಧ್ವ ಸಿದ್ಧಾಂತ ಪ್ರಚಾರಕ್ಕಾಗಿ ಎಂಬುದು ಪೇಜಾವರಶ್ರೀ ಸಹಿತ ಉಳಿದೆಲ್ಲ ಶ್ರೀಗಳಿಗೆ ಗೊತ್ತಿರುವ ವಿಷಯ.
ಪೇಜಾವರಶ್ರೀಗಳೇ ಉತ್ತರಿಸಿ: ಆದರೆ ಅವರು ಸಾಗರೋಲ್ಲಂಘನ ಮಾಡಿದ್ದಾರೆ ಎಂಬ ಕಾರಣಕ್ಕೆ ಅವರನ್ನು ದೂರೀಕರಿಸುವುದು ತಪ್ಪಲ್ಲವೇ ? ಇದಕ್ಕೆ ಪೇಜಾವರಶ್ರೀ 'ಒಂದು ವಾಕ್ಯದಲ್ಲಿ' ಉತ್ತರಿಸುವರೇ ? ಮಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ಪ್ರವಾಸ ಮಾಡುವಾಗ ಯಾವ 'ಸ್ವಾಮಿ' ಅರಬ್ಬಿ ಸಮುದ್ರ ಹಾದು ಹೋಗುವುದಿಲ್ಲ ಹೇಳಿ ? ನಿಮ್ಮ ಅರ್ಥದಲ್ಲಿ ಅಮೆರಿಕಕ್ಕೆ ಪ್ರವಾಸ ಮಾಡಿದರೆ ಮಾತ್ರ ಸಾಗರೋಲ್ಲಂಘನೆಯೇ ? ಆಧುನಿಕ ಯುಗದಲ್ಲಿ ಇಂತಹ ಕಂದಾಚಾರಗಳಿಗೆ ಬಲಿಯಾಗಿದ್ದಾರೆ ಎಂದರೆ ಜನಸಾಮಾನ್ಯ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ.
ಅಲ್ಲ ಮತ್ತೆ, ಉಡುಪಿ ಇತಿಹಾಸದಲ್ಲಿ ಅಷ್ಠ ಠಗಳ ಸ್ವಾಮಿಗಳು ವಿದೇಶ ಪ್ರ ಸ ಕೈಗೊಳ್ಳಬಾರದು ಎಂಬುದೇನಾದರೂ ಇದೆಯೇ ? ಒಂದು ವೇಳೆ ಹಾಗೇನಾದರೂ ಇದ್ದರೆ ಅದನ್ನು ಯಥಾವತ್ತಾ ಗಿ ಪಾಲಿಸುವುದು ಆಧುನಿಕತೆಗೆ ಭೂಷಣವೇ ? ಏನೇ ಇದ್ದರೆ 'ಸಮಾಜಕ್ಕೆ ಬೋಧನೆ ಮಾಡುತ್ತಿದ್ದೇವೆ' ಎನ್ನುತ್ತಿರುವ ಸಪ್ತ ಮಠಗಳ ಸ್ವಾಮಿಗಳು ಈಗ ಪುತ್ತಿಗೆ ಮಠಾಧೀಶರ ವಿವಾದ ಬಗೆಹರಿಸಿ ಸಮಾಜಕ್ಕೆ ಮಾರ್ಗದರ್ಶಕರಾಗಬೇಕು.
ಈ ಕೆಲಸ ಅಸಾಧ್ಯವಾದರೆ ಸಪ್ತಮಠಗಳ ಶ್ರೀಗಳು ಸಮಾಜಕ್ಕೆ ಬೋಧಿಸುವ ಹಕ್ಕನ್ನೂ ಕಳೆದುಕೊಳ್ಳುತ್ತಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications