ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಕೆ:ಮುನಿಯಪ್ಪ ಸಹಮತ

By Srinath
|
Google Oneindia Kannada News

bhagavadgita-in-karnataka-schools-no-problem-kh-muniyappa
ಬೆಂಗಳೂರು, ಜ.9: ಶಿಕ್ಷಣದಲ್ಲಿ ಭಗವದ್ಗೀತೆಯನ್ನು ಅಳವಡಿಸಬೇಕು ಎಂಬ ವಾದವನ್ನು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್‌. ಮುನಿಯಪ್ಪ ಬಲವಾಗಿ ಸಮರ್ಥಿಸಿದ್ದಾರೆ. ಭಗವದ್ಗೀತೆಯಲ್ಲಿ ಯಾವುದೇ ಧರ್ಮಕ್ಕೂ ಕಳಂಕ ತರುವ ವಿಚಾರಗಳಿಲ್ಲ. ಇದು ಯಾವುದೇ ಧರ್ಮಕ್ಕೂ ವಿರೋಧವಾಗಿಲ್ಲ. ಇದನ್ನು ಪಠ್ಯವಾಗಿ ಅಳವಡಿಸಿದರೆ ಯಾರೂ ವಿರೋಧಿಸುವುದಿಲ್ಲ ಎಂದರು.

ಭಾನುವಾರ ನಡೆದ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಚಿಂತನೆಯನ್ನೇ ಒಳಗೊಂಡ ಭಗವದ್ಗೀತೆಯು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅತ್ಯಗತ್ಯ. ಆದ್ದರಿಂದ ಇದನ್ನು ಪುಸ್ತಕದಲ್ಲಿ ಅಳವಡಿಸುವುದು ತುಂಬಾ ಪ್ರಯೋಜನಕಾರಿ. ಇದನ್ನು ಮುಖ್ಯಮಂತ್ರಿ ಸದಾನಂದಗೌಡರು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಅಭಿಯಾನದ ಸಮರ್ಪಣಾ ಸಮಾರಂಭದಲ್ಲಿ ಸಚಿವರು, ಶಾಸಕರಾದಿಯಾಗಿ ಗಣ್ಯ ನಾಯಕರು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಭಗವದ್ಗೀತೆ ಪಠಣ ಮಾಡಿ, ಗಮನಸೆಳೆದರು. ಡಿ.ವಿ. ಸದಾನಂದಗೌಡ ಮತ್ತು ಕೆ.ಎಚ್‌. ಮುನಿಯಪ್ಪ ಅವರನ್ನು ಹೊರತುಪಡಿಸಿದರೆ ಬೇರೆ ಯಾವ ಜನಪ್ರತಿನಿಧಿಗಳಿಗೂ ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶ ಇರಲಿಲ್ಲ.

ಹೀಗಾಗಿ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್‌. ಅಶೋಕ್‌, ಶಾಸಕ ಬಿ.ಎನ್‌. ವಿಜಯಕುಮಾರ್‌, ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಸೇರಿದಂತೆ ಪ್ರಮುಖ ಗಣ್ಯರು ಮಠಾಧೀಶರ ಆಶೀರ್ವಾದ ಪಡೆದು ಪ್ರೇಕ್ಷಕರ ಸಾಲಿನಲ್ಲಿ ಬಂದು ಕುಳಿತು ಭಗವದ್ಗೀತೆ ಪಠಣ ಮಾಡಿದರು.

English summary
Srimad Jagadguru Shankaracharya, Sri Sonda Swarnavalli Mahasamsthana, Sirsi had under taken Bhagavad Gita Abhiyana through out the state since 2007. In the concluding session of Gita Abhiyana in Bangalore on Jan 8th the Central Minister KH Muniyappa has said that there is no problem in teaching Bhagavadgita in Karnataka schools,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X