ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಕೆ:ಮುನಿಯಪ್ಪ ಸಹಮತ
ಭಾನುವಾರ ನಡೆದ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಚಿಂತನೆಯನ್ನೇ ಒಳಗೊಂಡ ಭಗವದ್ಗೀತೆಯು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅತ್ಯಗತ್ಯ. ಆದ್ದರಿಂದ ಇದನ್ನು ಪುಸ್ತಕದಲ್ಲಿ ಅಳವಡಿಸುವುದು ತುಂಬಾ ಪ್ರಯೋಜನಕಾರಿ. ಇದನ್ನು ಮುಖ್ಯಮಂತ್ರಿ ಸದಾನಂದಗೌಡರು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಅಭಿಯಾನದ ಸಮರ್ಪಣಾ ಸಮಾರಂಭದಲ್ಲಿ ಸಚಿವರು, ಶಾಸಕರಾದಿಯಾಗಿ ಗಣ್ಯ ನಾಯಕರು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಭಗವದ್ಗೀತೆ ಪಠಣ ಮಾಡಿ, ಗಮನಸೆಳೆದರು. ಡಿ.ವಿ. ಸದಾನಂದಗೌಡ ಮತ್ತು ಕೆ.ಎಚ್. ಮುನಿಯಪ್ಪ ಅವರನ್ನು ಹೊರತುಪಡಿಸಿದರೆ ಬೇರೆ ಯಾವ ಜನಪ್ರತಿನಿಧಿಗಳಿಗೂ ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶ ಇರಲಿಲ್ಲ.
ಹೀಗಾಗಿ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್. ಅಶೋಕ್, ಶಾಸಕ ಬಿ.ಎನ್. ವಿಜಯಕುಮಾರ್, ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಸೇರಿದಂತೆ ಪ್ರಮುಖ ಗಣ್ಯರು ಮಠಾಧೀಶರ ಆಶೀರ್ವಾದ ಪಡೆದು ಪ್ರೇಕ್ಷಕರ ಸಾಲಿನಲ್ಲಿ ಬಂದು ಕುಳಿತು ಭಗವದ್ಗೀತೆ ಪಠಣ ಮಾಡಿದರು.
Comments
English summary
Srimad Jagadguru Shankaracharya, Sri Sonda Swarnavalli Mahasamsthana, Sirsi had under taken Bhagavad Gita Abhiyana through out the state since 2007. In the concluding session of Gita Abhiyana in Bangalore on Jan 8th the Central Minister KH Muniyappa has said that there is no problem in teaching Bhagavadgita in Karnataka schools,
Story first published: Monday, January 9, 2012, 16:21 [IST]