'ಆರ್ಥಿಕ ಭಯೋತ್ಪಾದಕ' ರೆಡ್ಡಿ ಗಳಿಸಿದ್ದು 4300 ಕೋಟಿ: ಸಿಬಿಐ

ಜನಾರ್ದನ ರೆಡ್ಡಿಯನ್ನು ಮೊದಲ ಆರೋಪಿಯಾಗಿಯೂ ನಂತರದಲ್ಲಿ ಅವರ ಭಾವ ಶ್ರೀನಿವಾಸ ರೆಡ್ಡಿ, ಹಿರಿಯ ಮಾಜಿ ಅಧಿಕಾರಿಗಳಾದ ರಾಜಗೋಪಾಲ ರೆಡ್ಡಿ ಮತ್ತು ದಿ. ಲಿಂಗಾರೆಡ್ಡಿ ಅವರನ್ನು ಹೆಸರಿಸಿದೆ. ಈ ಮಧ್ಯೆ, ಮತ್ತೊಬ್ಬ ಹಿರಿಯ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರ ವಿರುದ್ಧವೂ ಪ್ರಕರಣದ ಸಂಬಂಧ ಆರೋಪಪಟ್ಟಿ ದಾಖಲಿಸಲು ಅನುಮತಿ ಕೋರಿ ಕೇಂದ್ರ ಸಕಾರಕ್ಕೆ ಸಿಬಿಐ ಮನವಿ ಮಾಡಿಕೊಂಡಿದೆ.
ಓಬಳಾಪುರಂ ಮೈನಿಂಗ್ ಕಂಪನಿಯ ಸ್ಥಳೀಯ ವಹಿವಾಟು ಮತ್ತು ರಫ್ತು ಬಾಬತ್ತಿನಲ್ಲಿ 2007-10ರ ಅವಧಿಯಲ್ಲಿ ಒಟ್ಟು 4,300 ಕೋಟಿ ರುಪಾಯಿ ಗಳಿಸಲಾಗಿದೆ ಎನ್ನುತ್ತಿದೆ ಸಿಬಿಐ ಚಾರ್ಜ್ ಷೀಟ್. ಈ ಹಣದಿಂದಲೇ ರೆಡ್ಡಿ ಹೆಲಿಕಾಪ್ಟರ್ ಖರೀದಿಸಿದ್ದು ಎಂದು ಸಿಬಿಐ ಉಲ್ಲೇಖಿಸಿದೆ.
ರೆಡ್ಡಿಗೆ ದೈವದತ್ತ ವರವಾದ ಬೀಜಿಂಗ್ ಒಲಿಂಪಿಕ್ಸ್: ಜನಾರ್ದನ ರೆಡ್ಡಿಗೆ ಚೀನಾದ ಬೀಜಿಂಗ್ ಒಲಿಂಪಿಕ್ಸ್ ದೈವದತ್ತ ವರವಾಗಿ ಪರಿಣಮಿಸಿತು. ಈ ಸುಭಿಕ್ಷ ಕಾಲದಲ್ಲೇ ಆತ ಆ ಪಾಟಿ ದುಡ್ಡು ಕೊಳ್ಳೆ ಹೊಡೆದಿದ್ದು ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ನೋಡಿ, 2007-08ರಲ್ಲಿ ಕಬ್ಬಿಣದ ಅದಿರು ಬೆಲೆ ಟನ್ನಿಗೆ 3,968 ರುಪಾಯಿಯಿತ್ತು. ಅದೇ ಟನ್ ಅದಿರಿನ ಬೆಲೆ 2008ರ ನಂತರ 1,758 ರುಪಾಯಿಗೆ ಕುಸಿದುಬಿತ್ತು. ಅಂದರೆ 2007-08ರ ಅವಧಿಯಲ್ಲಿ ರೆಡ್ಡಿ ಓಬಾಪುಂ ಕಂಪನಿ 2,316 ಕೋಟಿ ರುಪಾಯಿ ಗುಡ್ಡೆ ಹಾಕಿತು. ಇದೆಲ್ಲ ಬೀಜಿಂಗ್ ಒಲಿಂಪಿಕ್ಸ್ ಪ್ರಭಾವ ಎಂದು ಸಿಬಿಐ ಆರೋಪಪಟ್ಟಿ ಕಟ್ಟಿದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications