ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕೃಷ್ಣಗೌಡಗೆ ಮತ್ತೆ ಲೋಕಾಯುಕ್ತ ತನಿಖೆ ಕಾಟ

By Mahesh
|
Google Oneindia Kannada News

HD Balakrishna Gowda
ಬೆಂಗಳೂರು, ಜ.5: ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಎಚ್ ಡಿ ಬಾಲಕೃಷ್ಣ ಗೌಡರ ವಿರುದ್ಧ ಲೋಕಾಯುಕ್ತ ಪೊಲೀಸರ ತನಿಖೆಗೆ ಹೈಕೋರ್ಟ್ ಅಸ್ತು ಎಂದಿದೆ. ಈ ಮುಂಚೆ ಬಾಲಕೃಷ್ಣಗೌಡರ ಮೇಲೆ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಅದರೆ, ಎಫ್ಐಆರ್ ರದ್ದುಗೊಳಿಸುವಂತೆ ಬಾಲಕೃಷ್ಣಗೌಡ ಅವರು ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿವಿ ಪಿಂಟೋ ಅವರ ನ್ಯಾಯಪೀಠ ವಿಚಾರಣೆಗೆ 8 ವಾರಗಳ ಕಾಲ ತಡೆಯಾಜ್ಞೆ ನೀಡಿದ್ದರು.

ನೋ ರಿಲೀಫ್: ನಿವೃತ್ತ ಇಂಜಿನಿಯರ್ ಎಸ್ ಎನ್ ಬಾಲಕೃಷ್ಣ ಅವರ ದೂರು ಆಧರಿಸಿ ಲೋಕಾಯುಕ್ತ ಸಂಸ್ಥೆ ನಡೆಸುವ ತನಿಖೆ ರದ್ದುಗೊಳಿಸುವಂತೆ ಬಾಲಕೃಷ್ಣಗೌಡ ಮಾಡಿಅದ್ ಮನವಿಯನ್ನು ಎನ್ ಆನಂದ್ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. ತನಿಖೆಗೆ ಅಡ್ಡಿಪಡಿಸದಂತೆ ಬಾಲಕೃಷ್ಣಗೌಡರಿಗೆ ಸೂಚಿಸಿದೆ.

ಎಸ್ ಎನ್ ಬಾಲಕೃಷ್ಣ ಅವರು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಶೇಷಾಧಿಕಾರಿಯಾಗಿದ್ದರು. ಈ ಪ್ರಕರಣ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಬಾಲಕೃಷ್ಣಗೌಡರ ಪರ ವಕೀಲರು ಮಂಡಿಸಿದ ವಾದವನ್ನು ನ್ಯಾ ಆನಂದ್ ತಳ್ಳಿಹಾಕಿದ್ದಾರೆ.

English summary
High Court has revoke the stay order on Lokayukta probe into disappropriate assets case of HD Balakrishana Gowda. Earlier High court judge BV Pinto stayed further investigation by Lokayukta police. But, Judge Anand ordered probe against him today(Jan.5).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X