ಯಡಿಯೂರಪ್ಪಗೆ ಗೌಡ, ಈಶ್ವರಪ್ಪ ದಿಟ್ಟ ಉತ್ತರ

'ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕ ನಾನೇ' ಎಂದು ಮೂರು ದಿನದಿಂದ ಜಪಿಸುತ್ತಿರುವ ಯಡಿಯೂರಪ್ಪಗೆ ಶಿರಸಿಯಲ್ಲಿ ಗೌಡ ಉತ್ತರ ನೀಡಿದ್ದಾರೆ. 'ನೋಡಿ, ಮೊನ್ನೆ ದಿಲ್ಲಿ ಭೇಟಿ ವೇಳೆ ಹೈಕಮಾಂಡ್ ನನಗೆ ಸ್ಪಷ್ಟವಾಗಿ ಹೇಳಿದೆ. ನಾನೇ ಇನ್ನು ಒಂದೂವರೆ ವರ್ಷ ರಾಜ್ಯದಲ್ಲಿ ಮುಖ್ಯಮಂತ್ರಿ' ಎಂದು ತಮಗೆ ತಾವೇ ಖಾತ್ರಿ ಪಡಿಸಿಕೊಳ್ಳುವ ಧಾಟಿಯಲ್ಲಿ ಗೌಡರು ಹೇಳಿದ್ದಾರೆ.
'ಅದೇನೋ, ಸಂಪುಟ ವಿಸ್ತರಣೆ ಸದ್ಯಕ್ಕೆ ಆಗೊಲ್ಲ' ಎಂದು ಯಡಿಯೂರಪ್ಪ ತಮ್ಮ ಊರಲ್ಲಿ ಹೇಳಿದ್ದಾರಂತಲ್ಲ ಎಂದು ಸುದ್ದಿಗಾರರು ಕೇಳಿದ್ದೇ ತಡ. ಕೆಂಡಾಮಂಡಲರಾದ ಸದಾನಂದ ಯಾರು ಹೇಳಿದ್ದು? ಸಂಪುಟ ವಿಸ್ತರಣೆ ನನ್ನ ಪರಮಾಧಿಕಾರ. ವರಿಷ್ಠರು ಸೂಚನೆಯಂತೆ ಸದ್ಯದಲ್ಲೇ ಸಂಪುಟ ವಿಸ್ತರಣೆ ಮಾಡಿಯೇ ತೀರುತ್ತೇನೆ' ಎಂದು ಸ್ಪಷ್ಟಪಡಿಸಿದರು.












Click it and Unblock the Notifications