ವಾಜಪೇಯ ಸೋಮಯಾಗ ಅಗ್ನಿಗೆ ಯಡ್ಡಿಯೇ ಪೂರ್ಣಾಹುತಿ?

ಚಿಕ್ಕಮಗಳೂರಿನ ಜ್ಞಾನ ವಿಜ್ಞಾನ ಕೇಂದ್ರದ ವೇದ ವಿದ್ವಾಂಸ ಕೆ.ಎಸ್ ನಿತ್ಯಾನಂದ, ವಾಜಪೇಯ ಯಾಗ ಸಮಿತಿ ಹಾಗೂ ಋತ್ವಿಕ್ ವಾಣಿ ಬಳಗದ ವತಿಯಿಂದ ಆಯೋಜನೆಗೊಂಡಿರುವ ಯಾಗದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪಾಲ್ಗೊಂಡಿದ್ದರು.
ಬಿಎಸ್ ವೈಗೆ ಶಾಪವಾಗಲಿದೆಯೇ? : ಆದರೆ, ಕರ್ತೃವಾಗಿ ಯಡಿಯೂರಪ್ಪ ಅವರು ಪೀಠದಲ್ಲಿ ಕೂತಿದ್ದರೆ ಪತ್ನಿ ಸಮೇತ ಕೈಗೊಳ್ಳಬೇಕಿದ್ದ ಯಾಗದಲ್ಲಿ ಲೋಪ ಎಸೆಗಲಾಗಿದೆ. ಕೈಗೆ ಕಂಕಣ ಕಟ್ಟದೆ, ಸಪತ್ನಿ ಸಮೇತ ಯಾಗ ಆಚರಿಸದೆ ಇರುವುದು ದೋಷಕ್ಕೆ ಕಾರಣವಾಗಲಿದೆ.
ಯಡಿಯೂರಪ್ಪ ಅವರು ಸದ್ಯಕ್ಕೆ ಮುಖ್ಯಮಂತ್ರಿ(ರಾಜ) ಅಲ್ಲದ ಕಾರಣ ರಾಜಸೂಯ ಯಾಗದ ಬದಲಿಗೆ ವಾಜಪೇಯ ಯಾಗಕ್ಕೆ ಮನಸ್ಸು ಮಾಡಿದರು. ಋತ್ವಿಕರ ಸಂಪೂರ್ಣ ಮೇಲ್ವಿಚಾರಣೆಯಲ್ಲಿ ನಡೆಯುವ ಯಾಗದಲ್ಲಿ ಸಾಂಕೇತಿಕವಾಗಿ ಯಡಿಯೂರಪ್ಪ ಅವರು ಪಾಲ್ಗೊಂಡಿದ್ದರು ಎಂದರೆ ತಪ್ಪಾಗಲಾರದು ಆದರೆ, ಕರ್ತೃವಾಗಿ ಕಾಣಿಸಿಕೊಂಡಿದರೆ ಭೀಕರ ರೋಗಕ್ಕೆ ತುತ್ತಾಗುವುದು ಖಂಡಿತ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ವಾಜಪೇಯ ಯಾಗ ಹೇಗೆ ಆಚರಿಸಲಾಗುತ್ತದೆ?, ಯಡಿಯೂರಪ್ಪ ಮಾಡಿದ ತಪ್ಪೇನು?












Click it and Unblock the Notifications