ವಾಹನ ಹಾಯ್ದು ಬಾಲಕರು ಸೇರಿ ಮೂವರ ಸಾವು

ಆದೆಪ್ಪ ಸಿದ್ದಪ್ಪ ಕಿಳಕೇರಿ (10), ವೀರಪ್ಪ ಲಕ್ಷ್ಮಣ ಬೈಲಪತ್ತಾರ (10), ಮತ್ತು ಮಾನಮ್ಮ ಅಶೋಕ ಪತ್ತಾರ (35), ಮೃತಪಟ್ಟವರು. ಇವರೆಲ್ಲ ಖಾನಪುರ್ ಗ್ರಾಮದವರು ಆಗಿದ್ದಾರೆ. ಇವರೆಲ್ಲರೂ ಪಕ್ಕದ ಊರು ಗುಂಡಳ್ಳಿ ಜಾತ್ರೆಯಿಂದ ವಾಪಸ್ ಆಗುವಾಗ ಸ್ವಗ್ರಾಮದ ಹೊರವಲಯದಲ್ಲಿ ಈ ಘಟನೆ ಸಂಭವಿಸಿದೆ.
ಅಶೋಕ, ರಾಜು, ಶಂಕರ ಸೇರಿದಂತೆ ಐವರಿಗೆ ಗಾಯಗಳಾಗಿದ್ದು, ಅವರನ್ನು ಗುಲ್ಬರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications