ಮಾಜಿ ಪತ್ರಕರ್ತೆ ಸ್ಮಿತಾ ಸಾವಿನ ಕಾರಣ ಹುಡುಕುತ್ತಾ

ರೋಹಿತ್ ಕೂಡಾ ವಿಚಾರಣೆಗೆ ಸ್ಪಂದಿಸುತ್ತಿದ್ದು, ಸ್ಮಿತಾ ಜೊತೆ ದಾಂಪತ್ಯದಲ್ಲಿ ಕಲಹವೇ ಹೆಚ್ಚಾಗಿತ್ತು ಎಂದು ಒಪ್ಪಿಕೊಂಡಿದ್ದಾನೆ. ಆದರೆ, ಸಾವಿನಂಚಿನಲ್ಲಿದ್ದ ಪತ್ನಿಯನ್ನು ಉಳಿಸಿಕೊಳ್ಳಲು ವಿಫಲವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾನೆ ಎಂದು ತನಿಖಾಧಿಕಾರಿ ಪ್ರಭಾಕರ್ ಹೇಳಿದ್ದಾರೆ.
ಇನ್ಫೋಸಿಸ್ ಸೇರಿ ಕಾರ್ಪೊರೇಟ್ ಜಗತ್ತಿನ ಉದ್ಯೋಗಿಯಾದ ಸ್ಮಿತಾ ಹಾಗೂ ಟೆಕ್ಕಿ ರೋಹಿತ್ ವಿವಾಹ 2007ರಲ್ಲಿ ಆಗಿತ್ತು. ಸ್ಮಿತಾ ಇನ್ಫೋಸಿಸ್ ಸೇರಿ ಹೆಚ್ಚು ಕಮ್ಮಿ ಒಂದು ವರ್ಷ ಆಗಿದೆ ಎನ್ನಬಹುದು.
ವೆಬ್ ನಿರ್ವಾಹಕಿ ಸ್ಮಿತಾ ಕಳೆದುಕೊಂಡ ಇನ್ಫೋಸಿಸ್ ಆಕೆ ಸಾವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸ್ಮಿತಾ ಬರೆದಿರುವ ಡೆತ್ ನೋಟ್ ಈ ಪ್ರಕರಣದಲ್ಲಿ ಪ್ರಮುಖವಾಗಲಿದೆ. ಪತಿ ನೀಡುತ್ತಿದ್ದ ಕಿರುಕುಳದ ಬಗ್ಗೆ ಪತ್ರದಲ್ಲಿ ಏನಿದೆ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.
News reportage, travel writing, book reviews ನಲ್ಲಿ ವಿಶೇಷ ಪರಿಣತಿ ಪಡೆದಿದ್ದ ಸ್ಮಿತಾ ಅವರಿಗೆ ಕಾರ್ಪೋರೇಟ್ ಜಗತ್ತಿಗಿಂತ ಪತ್ರಿಕೋದ್ಯಮದಲ್ಲೇ ಪರಿಣತಿ, ಆಸಕ್ತಿ ಹೆಚ್ಚು ಎನ್ನಲಾಗಿದೆ.
ಇಟಲಿಯ ಮಿಲಾನೋದಲ್ಲಿ ಶೈಕ್ಷಣಿಕ ಫೆಲೋಶಿಪ್ ಪಡೆದಿದ್ದ ಸ್ಮಿತಾ ಮದುವೆ ನಂತರ ದುಡಿದಿದ್ದು ಪತ್ರಿಕಾ ರಂಗದಲ್ಲಿ. ಅದರಲ್ಲೂ ಪ್ರತಿಷ್ಠಿತ ಆಂಗ್ಲ ಪತ್ರಿಕೆಗಳಲ್ಲಿ ಎಂಬುದು ವಿಶೇಷ.
ಆದ್ರೆ, ಸ್ಮಿತಾ ಇನ್ಫೋಸಿಸ್ ಸೇರಲು ಕಾರಣವೇನು? ಇನ್ಫೋಸಿಸ್ ಸೇರಿದ ಸ್ಮಿತಾ ಹಾಗೂ ರೋಹಿತ್ ನಡುವೆ ವೃತ್ತಿ ವಿಷಯದಲ್ಲಿ ಉಂಟಾಗಿದ್ದ ಕಲಹವಾದರೂ ಏನು? ಜನಾಗ್ರಹದಂಥ ಸಾಮಾಜಿಕ ಕಳಕಳಿ ಸಂಸ್ಥೆಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಸ್ಮಿತಾ ಬಗ್ಗೆ ರೋಹಿತ್ ತಳೆದಿದ್ದ ನಿಲುವು ಏನು ಎಂಬುದು ವಿಚಾರಣೆ ಬಳಿಕ ತಿಳಿಯಲಿದೆ.
ಸ್ಮಿತಾಳ ಫೇಸ್ ಬುಕ್ ಪುಟದ ತುಂಬಾ RIP, ದುಃಖತಪ್ತ ಸಂದೇಶಗಳೇ ತುಂಬಿದೆ. ಎಲ್ಲಾ ಪ್ರಶ್ನೆಗಳಿಗೂ ಸದ್ಯದಲ್ಲೇ ಹೆಣ್ಣೂರು ಠಾಣೆ ಕಡೆಯಿಂದ ಉತ್ತರ ದೊರೆಯಲಿದೆ ಎಂಬ ನಿರೀಕ್ಷೆಯಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications