ಜನಾರ್ದನ ರೆಡ್ಡಿಗೆ ಶ್ರೀಲಕ್ಷ್ಮಿ ಮಾಡಿದ ಸೇವಾ ವಿವರ ಏನು?

illegal-mining-ias-srilakshmi-service-to-reddy
ಹೈದರಾಬಾದ್, ನ. 29: ಸೋಮವಾರ ಸಿಬಿಐ ತಮ್ಮನ್ನು ಬಂಧಿಸುವುದು ಖಚಿ ಎಂಬ ಮಾಹಿತಿಯನ್ನರಿತ ಶ್ರೀಲಕ್ಷ್ಮಿ ಬಂಧನ ತಪ್ಪಿಸಿಕೊಳ್ಳಲು ಅನೇಕ ವಿಫಲ ಪ್ರಯತ್ನಗಳನ್ನು ಮಾಡಿದ್ದಾರೆ. ದೆಹಲಿಯಿಂದ ಐಎಎಸ್ ಮತ್ತು ಐಪಿಎಸ್ ಲಾಬಿ ಮಾಡಿದ್ದಾರೆ. ಕೊನೆಗೆ, ಸಾಕ್ಷಾತ್ ಮುಖ್ಯಮಂತ್ರಿಯನ್ನೇ ಕಂಡು ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಆದರೆ ಶ್ರೀಲಕ್ಷ್ಮಿಯನ್ನು ಕಿರಣ್ ಕುಮಾರ್ ರೆಡ್ಡಿ ದೂರವಿಟ್ಟಿದ್ದಾರೆ.

ಮಾನವ ಪ್ರಯತ್ನಗಳೆಲ್ಲ ನಿಷ್ಫಲವಾದ ಬಳಿಕ ಶ್ರೀಲಕ್ಷ್ಮಿ ದೇವರಿಗೂ ಮೊರೆ ಹೋದರು. ಶ್ರೀಕಾಕುಲಂನ ಅರಸವೆಲ್ಲಿಯ ಸೂರ್ಯ ದೇವಸ್ಥಾನ ಮತ್ತು ಶ್ರೀಕುರಮಮ್‌ನ ಮಹಾವಿಷ್ಣು ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನೂ ಸಲ್ಲಿಸಿದ್ದರು. ಆದರೂ ಸಂಜೆ 5 ಗಂಟೆಗೆ ಶ್ರೀಲಕ್ಷ್ಮಿ ಬಂಧನಕ್ಕೆ ಸಿಬಿಐ ಮಹೂರ್ತ ಫಿಕ್ಸ್ ಮಾಡಿ ಆಗಿತ್ತು.

ಪ್ರಕರಣವೇನು? :
29 ಸಾವಿರ ಕೋಟಿ ರೂಪಾಯಿಗಳ ಅಕ್ರಮ ಅದಿರು ಗಣಿಗಾರಿಕೆ ಮತ್ತು ರಫ್ತು ವ್ಯವಹಾರದ ಹಗರಣ ಇದಾಗಿದ್ದು, ಶ್ರೀಲಕ್ಷ್ಮಿ ವಿರುದ್ಧ ಗಣಿಗಾರಿಕೆ ಕಾಯ್ದೆ, ಅರಣ್ಯ ಕಾಯ್ದೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಜನಾರ್ದನ ರೆಡ್ಡಿ ಒಡೆತನದ ಕಂಪೆನಿಗೆ ಶ್ರೀಲಕ್ಷ್ಮಿ ಅವರು ಅಕ್ರಮವಾಗಿ 97 ಹೆಕ್ಟೇರ್ ಪ್ರದೇಶವನ್ನು ಗಣಿಗಾರಿಕೆ ನಡೆಸಲು ಗುತ್ತಿಗೆ ನೀಡಿದ್ದರು ಎಂದು ಆಪಾದಿಸಲಾಗಿದೆ.

ಈ ಮಧ್ಯೆ, ಸಾಕ್ಷಿಗಳ ಹೇಳಿಕೆ ದಾಖಲಿಸುವ ಕಾರ್ಯ ಪೂರ್ತಿಗೊಂಡಿದ್ದು, ಡಿಸೆಂಬರ್ 3ರಂದು ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+