ಜನಾರ್ದನ ರೆಡ್ಡಿಗೆ ಶ್ರೀಲಕ್ಷ್ಮಿ ಮಾಡಿದ ಸೇವಾ ವಿವರ ಏನು?

ಮಾನವ ಪ್ರಯತ್ನಗಳೆಲ್ಲ ನಿಷ್ಫಲವಾದ ಬಳಿಕ ಶ್ರೀಲಕ್ಷ್ಮಿ ದೇವರಿಗೂ ಮೊರೆ ಹೋದರು. ಶ್ರೀಕಾಕುಲಂನ ಅರಸವೆಲ್ಲಿಯ ಸೂರ್ಯ ದೇವಸ್ಥಾನ ಮತ್ತು ಶ್ರೀಕುರಮಮ್ನ ಮಹಾವಿಷ್ಣು ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನೂ ಸಲ್ಲಿಸಿದ್ದರು. ಆದರೂ ಸಂಜೆ 5 ಗಂಟೆಗೆ ಶ್ರೀಲಕ್ಷ್ಮಿ ಬಂಧನಕ್ಕೆ ಸಿಬಿಐ ಮಹೂರ್ತ ಫಿಕ್ಸ್ ಮಾಡಿ ಆಗಿತ್ತು.
ಪ್ರಕರಣವೇನು? : 29 ಸಾವಿರ ಕೋಟಿ ರೂಪಾಯಿಗಳ ಅಕ್ರಮ ಅದಿರು ಗಣಿಗಾರಿಕೆ ಮತ್ತು ರಫ್ತು ವ್ಯವಹಾರದ ಹಗರಣ ಇದಾಗಿದ್ದು, ಶ್ರೀಲಕ್ಷ್ಮಿ ವಿರುದ್ಧ ಗಣಿಗಾರಿಕೆ ಕಾಯ್ದೆ, ಅರಣ್ಯ ಕಾಯ್ದೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಜನಾರ್ದನ ರೆಡ್ಡಿ ಒಡೆತನದ ಕಂಪೆನಿಗೆ ಶ್ರೀಲಕ್ಷ್ಮಿ ಅವರು ಅಕ್ರಮವಾಗಿ 97 ಹೆಕ್ಟೇರ್ ಪ್ರದೇಶವನ್ನು ಗಣಿಗಾರಿಕೆ ನಡೆಸಲು ಗುತ್ತಿಗೆ ನೀಡಿದ್ದರು ಎಂದು ಆಪಾದಿಸಲಾಗಿದೆ.
ಈ ಮಧ್ಯೆ, ಸಾಕ್ಷಿಗಳ ಹೇಳಿಕೆ ದಾಖಲಿಸುವ ಕಾರ್ಯ ಪೂರ್ತಿಗೊಂಡಿದ್ದು, ಡಿಸೆಂಬರ್ 3ರಂದು ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.











Click it and Unblock the Notifications