ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಾಪ! ಯಡಿಯೂರಪ್ನೋರಿಗೆ ತಡವಾಗಿ ಜ್ಞಾನೋದಯ
'ಬಳ್ಳಾರಿ ಜನರಿಗೆ ಸ್ವಾತಂತ್ರ್ಯವಿಲ್ಲ, ಭಯದ ವಾತಾವರಣ ನೆಲೆಸಿದೆ' ಎಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಹೇಳಿಕೆ ಉಡಾಫೆಯದ್ದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲೇವಡಿಯಾಡಿದರು.
ಇದರಿಂದ ಯಡಿಯೂರಪ್ಪ ಮತ್ತು ಸದಾನಂದ ಗೌಡರಿಗೆ ಈಗ ಜ್ಞಾನೋದಯವಾದಂತಿದೆ. ಬಳ್ಳಾರಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಲು ಬೆಂಬಲಿಸಿದವರೇ ತಾವು ಮಾಡಿದ ಕಾರ್ಯವನ್ನು ಮರೆತಿದ್ದಾರೆ ಎಂದು ಟೀಕಿಸಿದರು.
ಅಧಿಕಾರದಲ್ಲಿರುವಾಗ ಜಿಲ್ಲೆಯಲ್ಲಿ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡಿದರು. ಸಚಿವ ಮತ್ತು ಶಾಸಕರಿಗೆ ಯಾವುದೇ ರೀತಿಯ ನಿರ್ಬಂಧ ಹೇರಲಿಲ್ಲ. ಈಗ ಪಶ್ಚಾತ್ತಾಪ ವ್ಯಕ್ತಪಡಿಸುತ್ತಿದ್ದಾರೆ. ಇದು ಎಷ್ಟು ಸರಿ? ಎಂದೂ ಕುಮಾರಸ್ವಾಮಿ ಕಟಕಿಯಾಡಿದರು.
Comments
ಯಡಿಯೂರಪ್ಪ ಸದಾನಂದ ಗೌಡ ಶ್ರೀರಾಮುಲು ಬಳ್ಳಾರಿ ಉಪ ಚುನಾವಣೆ ಜಿಲ್ಲಾಸುದ್ದಿ ಅಕ್ರಮ ಗಣಿಗಾರಿಕೆ ವಿವಾದ hd kumaraswamy yediyurappa sreeramulu bjp district news illegal mining sadananda gowda corruption
English summary
Bellary by polls campaign : Reffering to Reddy brothers BS Yeddyurappa has said that Bellary people scared. But HD Kumaraswamy castigates BSY who was the CM at that period.
Story first published: Wednesday, November 23, 2011, 7:59 [IST]