ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಪ! ಯಡಿಯೂರಪ್ನೋರಿಗೆ ತಡವಾಗಿ ಜ್ಞಾನೋದಯ

By Srinath
|
Google Oneindia Kannada News

bellary-people-scared-says-bsy-hdk-castigates
ಸಿಂಧನೂರು, ನ. 23 : 'ಬಳ್ಳಾರಿಯಲ್ಲಿ ಭಯದ ವಾತಾವರಣವಿದೆ. ಇದನ್ನು ತಡೆಯಬೇಕು. ಜನರು ನಿರ್ಭಯವಾಗಿ ಹೊರಬಂದು ಯಾರಿಗಾದರೂ ಮತ ಹಾಕುವಂತಾಗಬೇಕು' ಎಂದು ನಾಡಿನ ಮಾಜಿ ಮತ್ತು ಹಾಲಿ ದೊರೆಗಳು ಆತಂಕ ವ್ಯಕ್ತಪಡಿಸಿರುವುದಕ್ಕೆ ಮತ್ತೊಬ್ಬ ಮಾಜಿ ದೊರೆ ಲೇವಡಿ ಮಾಡಿದ್ದಾರೆ.

'ಬಳ್ಳಾರಿ ಜನರಿಗೆ ಸ್ವಾತಂತ್ರ್ಯವಿಲ್ಲ, ಭಯದ ವಾತಾವರಣ ನೆಲೆಸಿದೆ' ಎಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಹೇಳಿಕೆ ಉಡಾಫೆಯದ್ದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಲೇವಡಿಯಾಡಿದರು.

ಇದರಿಂದ ಯಡಿಯೂರಪ್ಪ ಮತ್ತು ಸದಾನಂದ ಗೌಡರಿಗೆ ಈಗ ಜ್ಞಾನೋದಯವಾದಂತಿದೆ. ಬಳ್ಳಾರಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಲು ಬೆಂಬಲಿಸಿದವರೇ ತಾವು ಮಾಡಿದ ಕಾರ್ಯವನ್ನು ಮರೆತಿದ್ದಾರೆ ಎಂದು ಟೀಕಿಸಿದರು.

ಅಧಿಕಾರದಲ್ಲಿರುವಾಗ ಜಿಲ್ಲೆಯಲ್ಲಿ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡಿದರು. ಸಚಿವ ಮತ್ತು ಶಾಸಕರಿಗೆ ಯಾವುದೇ ರೀತಿಯ ನಿರ್ಬಂಧ ಹೇರಲಿಲ್ಲ. ಈಗ ಪಶ್ಚಾತ್ತಾಪ ವ್ಯಕ್ತಪಡಿಸುತ್ತಿದ್ದಾರೆ. ಇದು ಎಷ್ಟು ಸರಿ? ಎಂದೂ ಕುಮಾರಸ್ವಾಮಿ ಕಟಕಿಯಾಡಿದರು.

English summary
Bellary by polls campaign : Reffering to Reddy brothers BS Yeddyurappa has said that Bellary people scared. But HD Kumaraswamy castigates BSY who was the CM at that period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X