ಉತ್ತರ ಪ್ರದೇಶ ನಾಲ್ಕು ಹೋಳು ಮಾಡಲು ಅಸೆಂಬ್ಲಿ ಅಂಗೀಕಾರ

ಮಾಯಾವತಿ ಸಚಿವ ಸಂಪುಟ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿದ ಮೇಲೆ, ಈ ಬಗ್ಗೆ ಚರ್ಚೆ ನಡೆಸಲು ಚಳಿಗಾಲದ ಅಧಿವೇಶನದಲ್ಲಿ ಸೂಕ್ತ ವೇದಿಕೆ ನಿರ್ಮಾಣವಾಗಿತ್ತು. ಆದರೆ,ಧ್ವನಿಮತದ ಮೂಲಕ ಉತ್ತರ ಪ್ರದೇಶ ವಿಂಗಡನೆಗೆ ಒಪ್ಪಿಗೆ ಸಿಕ್ಕಿದೆ ಎಂದು ಘೋಷಣೆಯಾಗುತ್ತಿದ್ದಂತೆ ಅಸೆಂಬ್ಲಿಯನ್ನು ಮುಂದೂಡಬೇಕಾಯಿತು.
ಬಿಜೆಪಿ, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಾಯಕರು ಮಾಯಾವತಿ ರಾಜೀನಾಮೆಗೆ ಒತ್ತಾಯಿಸಿ, ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು. ವಿಧೇಯಕಕ್ಕೆ ಅಂಗೀಕಾರ ದೊರೆತ ಬೆನ್ನಲ್ಲೇ ಕೇಂದ್ರ ಸರ್ಕಾರಕ್ಕೆ ವಿಧೇಯಕರ ಪ್ರತಿಯನ್ನು ಸಲ್ಲಿಸಲು ಮಾಯಾವತಿ ಸರ್ಕಾರ ಮುಂದಾಗಿದೆ.
ಕೇಂದ್ರ ಸರ್ಕಾರ ಮಾಯಾವತಿ ಮಂಡಿಸಿರುವ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿದರೆ ಮಾತ್ರ ವಿಧೇಯಕ ಜಾರಿಗೆ ಬರಲಿದೆ.
ಪೂರ್ವಾಂಚಲ್ ಅಥವಾ ಪೂರ್ವ ಉತ್ತರ ಪ್ರದೇಶ, ಕೇಂದ್ರ ಉತ್ತರ ಪ್ರದೇಶ ಅಥವಾ ಅವಧ್ ಪ್ರದೇಶ, ಹರಿತ್ ಪ್ರದೇಶ ಹಾಗೂ ಬುಂದೆಲ್ ಖಂಡ್ ಎಂದು ಉತ್ತರ ಪ್ರದೇಶವನ್ನು ನಾಲ್ಕು ಭಾಗಗಳಾಗಿ ವಿಂಗಡಿಸುವ ಯೋಜನೆಯನ್ನು ಮಾಯಾವತಿ ಹಾಕಿಕೊಂಡಿದ್ದಾರೆ.












Click it and Unblock the Notifications