ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಾಮೀನು ತಿರಸ್ಕೃತ: ಶ್ರೀರಾಮುಲು ಚುನಾವಣೆಯಿಂದ ರೆಡ್ಡಿ ಬಹುದೂರ
ಇದರಿಂದಾಗಿ ಗಣಿಧಣಿ ಮತ್ತು ಅವರ ಬಾವ ಜಾಮೀನು ಪಡೆಯುವ ಕೊನೆಯ ಅವಕಾಶವನ್ನೂ ಕಳೆದುಕೊಂಡಿದ್ದು, ಮುಂದಿನ ತೀರ್ಪಿನವರೆಗೆ ಜೈಲಿನಲ್ಲೇ ಇರಬೇಕಾಗಿದೆ. ಓಬಳಾಪುರಂ ಗಣಿ ಅಕ್ರಮದಲ್ಲಿ ಇವರಿಬ್ಬರು ಪ್ರಭಾವ ಬೀರಿ ಸಾಕ್ಷಿ ನಾಶಪಡಿಸುವ ಸಾಧ್ಯತೆಗಳಿವೆ ಎಂಬ ಸಿಬಿಐ ವಾದವನ್ನು ನ್ಯಾಯಾಧೀಶರು ಒಪ್ಪಿಕೊಂಡರು. ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಂಧಿತರಾದ ಓಎಂಸಿ ಮಾಲೀಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರ ಜಾಮೀನು ಅರ್ಜಿಯನ್ನೂ ಇದೇ ವೇಳೆ ತಿರಸ್ಕರಿಸಿದೆ.
ಸೆ. 5 ರಂದು ಬೆಳಗಿನ ಜಾವ ರೆಡ್ಡಿ ದ್ವಯರನ್ನು ಸಿಬಿಐ ಬಂಧಿಸಿತ್ತು. ಈ ನಡುವೆ 6 ದಿನಗಳ ಕಾಲ ಆರೋಪಿಗಳಿಬ್ಬರನ್ನೂ ತನ್ನ ವಶಕ್ಕೆ ತೆಗೆದುಕೊಂಡಿದ್ದ ಸಿಬಿಐ ಮತ್ತೆ ಅವರನ್ನು ತನ್ನ ವಶಕ್ಕೆ ನೀಡಬೇಕೆಂದು ಸಿಬಿಐ ಹೈಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಬೇಕಾಗಿದೆ. ಆದಾಗ್ಯೂ ಸಿಬಿಐ ತನ್ನ ವಿಚಾರಣೆಯನ್ನು ತೀವ್ರಗೊಳಿಸಿದ್ದು, ಡಿಸೆಂಬರ್ 4ರಂದು ಸಿಬಿಐ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಿಸಲಿದೆ.
Comments
ಜನಾರ್ದನ ರೆಡ್ಡಿ ಭೂ ಹಗರಣ ಸಿಬಿಐ ಬಳ್ಳಾರಿ ಅಕ್ರಮ ಗಣಿಗಾರಿಕೆ ಹೈದರಾಬಾದ್ ಜಿಲ್ಲಾಸುದ್ದಿ ತಿರುಪತಿ ದೇವರು janardhana reddy illegal mining cbi hyderabad
English summary
A special court Thursday once again dismissed the bail petitions of former Karnataka minister Gali Janardhana Reddy and his brother-in-law Srinivasa Reddy in an illegal mining case. The CBI earlier questioned the accused during their six-day custody in September. The investigating agency's petition, seeking their custody again, is pending in the high court.
Story first published: Friday, November 18, 2011, 7:56 [IST]