ಕ್ಯಾಬಿನೆಟ್ ಮಂತ್ರಿ ಸ್ಥಾನ ಆಫರ್ ಇತ್ತಾ? ಅಂದ್ರೆ ಹೆಗ್ಡೆ ಗರಂ

Santosh Hegde
ಬೆಂಗಳೂರು, ನ.16: 'ಕಾಂಗ್ರೆಸ್ ಜೊತೆ ಕೈ ಜೋಡಿಸಿರುವ ಹೆಗ್ಡೆ ಅವರಿಗೆ ಗವರ್ನರ್ ಸ್ಥಾನ ಅಥವಾ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗುತ್ತದೆ ಎಂದು ಬಿಎಸ್ ಯಡಿಯೂರಪ್ಪ ಅವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ನನ್ನ ನೈತಿಕತೆ ಪ್ರಶ್ನಿಸುವ ಅಧಿಕಾರ ಅವರಿಗಿಲ್ಲ' ಎಂದು ನ್ಯಾ.ಸಂತೋಷ್ ಹೆಗ್ಡೆ ಗುಡುಗಿದರು.

ಧರಂ ಸಿಂಗ್ ಅವರು ಕೂಡಾ ಅವರ ಹೆಸರು ವರದಿಯಲ್ಲಿ ಪ್ರಸ್ತಾಪವಾದಾಗ ನನ್ನನ್ನು ಟೀಕಿಸಿದ್ದರು. ಯಾವ ಪಕ್ಷಗಳು ನನ್ನನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಹೆಗ್ಡೆ ಹೇಳಿದರು.

ಅಡ್ವಾಣಿ ಜೊತೆ ರಾಜಕೀಯ ಸಂಬಂಧವಿಲ್ಲ. ರಾಜೀನಾಮೆ ಹಿಂಪಡೆಯುವ ಸಂದರ್ಭದಲ್ಲಿ ಅವರು ಯಾವುದೇ ಆಫರ್ ನೀಡಲಿಲ್ಲ. ನನಗೆ ಯಾವ ರಾಜಕೀಯ ಪಕ್ಷಗಳ ಸಹವಾಸವೂ ಇಲ್ಲ.

ಜನ ಲೋಕಪಾಲ್ ಮಸೂದೆ ಜಾರಿಗಾಗಿ ಹೋರಾಟ ನಡೆಸಿರುವ ಟೀಂ ಅಣ್ಣಾಗೆ ನನ್ನ ಬೆಂಬಲವಿದೆ. ಆದರೆ, ಅಣ್ಣಾ ಟೀಂ ಕೈಗೊಂಡ ಕೆಲ ನಿರ್ಣಯಗಳ ಬಗ್ಗೆ ಬೇಸರವಿದೆ ಎಂದು ಹೆಗ್ಡೆ ಹೇಳಿದರು.

ಮತ್ತೆ ಮಧುಕರ ಶೆಟ್ಟಿ ಕಡೆ ಹೊರಳಿದ ಹೆಗ್ಡೆ, ನಾಲ್ಕು ತಿಂಗಳ ಹಿಂದಿನ ಸಂದರ್ಶನ ಹೀಗೆ ಸಡನ್ ಆಗಿ ಪ್ರಕಟವಾಗಿದ್ದಾದರೂ ಏಕೆ? ಯಡಿಯೂರಪ್ಪ ಅವರ ಬಂಧನದ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆ ಮುಚ್ಚಲು ಯಾರಾದರೂ ಹುನ್ನಾರ ನಡೆಸಿದ್ದಾರೆ ಆದರೆ ಅದು ಸಾಧ್ಯವಿಲ್ಲ ಎಂದು ಸಂತೋಷ್ ಹೆಗ್ಡೆ ಪುನರ್ ಪ್ರಶ್ನಾವಳಿಗಳನ್ನು ಹರಡಿದರು.

ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ಹೊಸದೇನೂ ಹೇಳದಿದ್ದರೂ ಅವರು ಎತ್ತಿರುವ ಹಳೆ ಪ್ರಶ್ನೆಗಳಿಗೆ ಬಿಎಸ್ ಯಡಿಯೂರಪ್ಪ, ಎಚ್ ಡಿ ಕುಮಾರಸ್ವಾಮಿ ಹಾಗೂ ಅವರ ಅನುಯಾಯಿಗಳು ನೀಡುವ ಹೊಸ ಉತ್ತರಗಳ ಮೂಲಕ ಈ ಮಾಲಿಕೆ ಮುಂದುವರೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+