ಬಾಲಕ ರೆಡ್ಡಿಗೆ ಚಂದಮಾಮ ಕಥೆಗಳೆಂದರೆ ಪಂಚಪ್ರಾಣ

reddy-down-load-his-lifestyle-from-chandamama
ಬಳ್ಳಾರಿ, ನ.11: ಬಳ್ಳಾರಿಯ ದಂಡು ಪ್ರದೇಶದಲ್ಲಿರುವ ಬಳ್ಳಾರಿ ವಿಮಾನ ನಿಲ್ದಾಣವೂ ಕಳೆದ ಎರಡು ತಿಂಗಳಿಂದ ಡಲ್ ಆಗಿದೆ. ದಿನಕ್ಕೆ ಕನಿಷ್ಠ ಐದಾರು ಖಾಸಗಿ ಹೆಲಿಕಾಪ್ಟರುಗಳು ಇಲ್ಲಿಂದ ಹಾರುತ್ತಿದ್ದವು. ರೆಡ್ಡಿ ಹಾರಾಟ ಸ್ಥಗಿತಗೊಳ್ಳುತ್ತಿದ್ದಂತೆ ಇಲ್ಲೂ ವಿಮಾನಗಳ ಹಾರಾಟದ ಸದ್ದು ಕ್ಷೀಣಿಸಿದೆ.

ರೆಡ್ಡಿಗೆ ಬಾಲ್ಯದಲ್ಲಿ ಚಂದಮಾಮ ಕಥೆಗಳೆಂದರೆ ಪಂಚಪ್ರಾಣ. ಅದರಲ್ಲಿ ಬರುತ್ತಿದ್ದ ಐಭೋಗ, ವೈಭೋಗ ಕಥೆಗಳನ್ನು ಓದಿ ಮುಂದೊಂದು ದಿನ ತಾನೂ ಹೀಗೇ ಆಗಬೇಕು ಎಂದು ಕನಸು ಕಂಡಿದ್ದ. ರೆಡ್ಡಿ ಶಾಲಾ ಬ್ಯಾಗಿನಲ್ಲಿ ಚಂದಮಾಮ ಪುಸ್ತಕಗಳಿಗೆ ಸದಾ ಜಾಗವಿರುತ್ತಿತ್ತು. ಕತೆಗಳಲ್ಲಿ ವರ್ಣನೆಯಾಗುತ್ತಿದ್ದ ವೈಭವೋಪೇತ ಅರಮನೆಗಳಲ್ಲಿ ಈತ ವಿಹರಿಸುತ್ತಿದ್ದ.

ಮುಂದೆ ಸರಿಯಾಗಿ 44 ವರ್ಷದ ವಯಸ್ಸಿನವನಾದಾಗ ಸಿಬಿಐ ಅಧಿಕಾರಿಗಳು ಜಿ. ಜನಾರ್ಧನ ರೆಡ್ಡಿಯನ್ನು ಆತನ ಮನೆಯಿಂದ ಸೆಪ್ಟೆಂಬರ್ 5ರಂದು ನಿದ್ದೆಯಿಂದ ಎಬ್ಬಿಸಿಕೊಂಡು ಹೋದಾಗ ... ಬಾಲಕ ರೆಡ್ಡಿ ಕಾಣುತ್ತಿದ್ದ ಕನಸುಗಳು ಸಾಕಾರಗೊಂಡಿರುವುದನ್ನು ನೋಡಿ ಸಿಬಿಐ ಅಧಿಕಾರಿಗಳು ಬೆಚ್ಚಿಬಿದ್ದಿದ್ದು ಕಟು ವಾಸ್ತವವಾಗಿತ್ತು. ಕುಠೀರದಲ್ಲಿ ರೆಡ್ಡಿಯದ್ದು ರಾಜ ವೈಭೋಗ ಎಂಬುದು ಅರಿವಿಗೆ ಬರಲು ಸಿಬಿಐನವರಿಗೆ ಹೆಚ್ಚು ಕಾಲ ಬೇಕಾಗಲಿಲ್ಲ.

ಬಳ್ಳಾರಿಯ ಕುಠೀರದಲ್ಲಿ ರಾಜ ವಿಲಾಸ ನಡೆಸುತ್ತಿದ್ದ ರೆಡ್ಡಿ ಹುಟ್ಟುತ್ತಾ ಚಿನ್ನದ ಚಮಚವನ್ನಿಟ್ಟುಕೊಂಡು ಹುಟ್ಟಿರಲಿಲ್ಲ. ಅಂದರೆ ಬಡತನ ಅವರ ತಂದೆಯ ಮನೆಯಲ್ಲಿ ನೆಲೆಸಿತ್ತು. ಅವರಪ್ಪ ಚೆಂಗಾ ರೆಡ್ಡಿ ಕನಿಷ್ಠ ಬಿಲ್ಲೆಯ ಪೇದೆಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+