ಲೋಕಾಯುಕ್ತರ ಜಾತಕ ಬಯಲಾಯ್ತು: ಕುಮಾರಸ್ವಾಮಿ

ನಾಗಮಂಗಲದಲ್ಲಿ ಮಾತನಾಡಿದ ಕುಮಾರಸ್ವಾಮಿ ಸಂತೋಷ್ ಹೆಗಡೆಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈಗ ಲೋಕಾಯುಕ್ತದ ವಿರುದ್ಧ ಮಾತನಾಡಿರುವ ಮಧುಕರ್ ಶೆಟ್ಟಿ, ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಧಿಕಾರಾವಧಿಯಲ್ಲಿಯೇ ಅಧಿಕಾರ ನಿರ್ವಹಿಸಿದವರು. ಅವರೇ ಲೋಕಾಯುಕ್ತದಲ್ಲಿ ಎಲ್ಲವೂ ಸರಿಯಿಲ್ಲ ಎಂದಿದ್ದಾರೆ.
ಲೋಕಾಯುಕ್ತದ ಅವ್ಯವಸ್ಥೆಯಿಂದ ಬೇಸತ್ತು ಸುದೀರ್ಘ ಅವಧಿಯ ರಜೆಯ ಮೇಲೆ ಅಮೇರಿಕಾಕ್ಕೆ ತೆರಳಿರುವ ಮಧುಕರ್ ಶೆಟ್ಟಿ, ಹೋಗುವ ಮೊದಲು ತಾವು ಅನುಭವಿಸಿದ ಮಾನಸಿಕ ಹಿಂಸೆ ಹಾಗೂ ಲೋಕಾಯುಕ್ತದಲ್ಲಿ ನಡೆದಿರುವ ಅವ್ಯವಹಾರ ಕುರಿತು ತಮ್ಮೊಂದಿಗೆ ಮಾತನಾಡಿದ್ದರು" ಎಂದಿದ್ದಾರೆ.












Click it and Unblock the Notifications