ಲೋಕಾಯುಕ್ತರ ಜಾತಕ ಬಯಲಾಯ್ತು: ಕುಮಾರಸ್ವಾಮಿ
ನಾಗಮಂಗಲ,
ನ. 13: "ಲೋಕಾಯುಕ್ತದಲ್ಲಿ ಎಲ್ಲವೂ ಸರಿಯಿಲ್ಲ. ನಾನು ಲೋಕಯುಕ್ತದಲ್ಲಿ ನೋಡಿದಷ್ಟು ಮೋಸಗಾರರನ್ನು ಭ್ರಷ್ಟರಲ್ಲೂ ನೋಡಿಲ್ಲ. ಇವರು ಭ್ರಷ್ಟರಿಗಿಂತಲೂ ಡೇಂಜರ್" ಎಂಬ ಈ ಮೊದಲು ಲೋಕಾಯುಕ್ತ ಎಸ್ಪಿಯಾಗಿದ್ದ ಮಧುಕರ ಶೆಟ್ಟಿ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿದ್ದಾರೆ. id="toptextpromo">ನಾಗಮಂಗಲದಲ್ಲಿ
ಮಾತನಾಡಿದ ಕುಮಾರಸ್ವಾಮಿ ಸಂತೋಷ್ ಹೆಗಡೆಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈಗ ಲೋಕಾಯುಕ್ತದ ವಿರುದ್ಧ ಮಾತನಾಡಿರುವ ಮಧುಕರ್ ಶೆಟ್ಟಿ, ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಧಿಕಾರಾವಧಿಯಲ್ಲಿಯೇ ಅಧಿಕಾರ ನಿರ್ವಹಿಸಿದವರು. ಅವರೇ ಲೋಕಾಯುಕ್ತದಲ್ಲಿ ಎಲ್ಲವೂ ಸರಿಯಿಲ್ಲ ಎಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಲೋಕಾಯುಕ್ತದ
ಅವ್ಯವಸ್ಥೆಯಿಂದ ಬೇಸತ್ತು ಸುದೀರ್ಘ ಅವಧಿಯ ರಜೆಯ ಮೇಲೆ ಅಮೇರಿಕಾಕ್ಕೆ ತೆರಳಿರುವ ಮಧುಕರ್ ಶೆಟ್ಟಿ, ಹೋಗುವ ಮೊದಲು ತಾವು ಅನುಭವಿಸಿದ ಮಾನಸಿಕ ಹಿಂಸೆ ಹಾಗೂ ಲೋಕಾಯುಕ್ತದಲ್ಲಿ ನಡೆದಿರುವ ಅವ್ಯವಹಾರ ಕುರಿತು ತಮ್ಮೊಂದಿಗೆ ಮಾತನಾಡಿದ್ದರು" ಎಂದಿದ್ದಾರೆ.











Click it and Unblock the Notifications