ಯಡ್ಡಿ ಔಟ್, ಜೈಲರ್ ಬ್ಯಾಕ್ ಟು ಪರಪ್ಪನ ಅಗ್ರಹಾರ

Parappana Agrahara jail
ಬೆಂಗಳೂರು, ನ.11: ಪರಪ್ಪನ ಅಗ್ರಹಾರದ ಜೈಲಿನಿಂದ ಜೈಲುಹಕ್ಕಿ ಯಡಿಯೂರಪ್ಪ ಹೊರಬಿದ್ದ ಮೇಲೆ ಸೂಪರಿಂಟೆಂಡೆಂಟ್ ಆಗಿದ್ದ ಎಚ್ ಟಿ ಲಕ್ಷ್ಮಿ ನಾರಾಯಣ್ ಅವರು ಮತ್ತೆ ಜೈಲಿಗೆ ಮರಳಿದ್ದಾರೆ. ಲಕ್ಷ್ಮಿ ನಾರಾಯಣ್ ಅವರನ್ನು ಕೆಲಕಾಲ ಬಳ್ಳಾರಿಗೆ ವರ್ಗಾಯಿಸಲಾಗಿತ್ತು.

ಅ.29 ರಂದು ಲಕ್ಷಿ ನಾರಾಯಣ್ ಅವರನ್ನು ಬಳ್ಳಾರಿಗೆ ವರ್ಗ ಮಾಡಿ ಅವರ ಸ್ಥಾನದಲ್ಲಿ ಲಿಂಗರಾಜು ಎಂಬುವರನ್ನು ಸರ್ಕಾರ ನೇಮಿಸಿತ್ತು. ಈ ವರ್ಗಾವಣೆಯ ಹಿಂದೆ ಯಡಿಯೂರಪ್ಪ ಅವರ ಕೈವಾಡವಿತ್ತು ಎಂದು ಹೇಳಲಾಗಿದೆ.

ತಮ್ಮ ಕಾರ್ಯನಿರ್ವಹಣೆಯಲ್ಲಿ ಕಠಿಣ ನಿಲುವು ತಾಳುತ್ತಿದ್ದ ಲಕ್ಷ್ಮಿನಾರಾಯಣ ಮತ್ತು ಯಡಿಯೂರಪ್ಪ ಅವರ ಬಂಟ ಸಿದ್ಧ ಲಿಂಗಸ್ವಾಮಿ ನಡುವೆ ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು.

ಬೇರೆ ವಿಐಪಿ ಸಂದರ್ಶಕರ ವಿಷಯ ಹಾಗಿರಲಿ ಸ್ವತಃ ಸಿದ್ದಲಿಂಗ ಸ್ವಾಮಿಗೆ 'ನೋ ಎಂಟ್ರಿ' ಬೋರ್ಡ್ ತೋರಿಸಿದ್ದ ಲಕ್ಷ್ಮಿ ನಾರಾಯಣ ಅವರಿಗೆ ತಕ್ಕ ಪಾಠ ಕಲಿಸಲು ಸ್ವಾಮಿ ನಿರ್ಧರಿಸಿದ್ದ.

ಒಂದು ದಿನ ರಾತ್ರಿ ಊಟ ತಡವಾದಾಗ ಯಡಿಯೂರಪ್ಪ ಕೆಂಡಮಂಡಲವಾಗಿದ್ದರು. ಸ್ವಾಮಿ ಮರ್ಮಕ್ಕೆ ತಾಗುವಂತೆ ಬೈದಿದ್ದರು ಎನ್ನಲಾಗಿದೆ. ಇದರ ಪರಿಣಾಮ ಜೈಲರ್ ಲಕ್ಷ್ಮಿನಾರಾಯಣ ಅವರ ಹಠಾತ್ ಎತ್ತಂಗಡಿ.

ಲಕ್ಷ್ಮಿನಾರಾಯಣ ಅವರ ವರ್ಗಾವಣೆಗೆ ಕೋರ್ಟ್ ತಡೆಯಾಜ್ಞೆ ನೀಡದ ಪರಿಣಾಮ, ದಕ್ಷ ಅಧಿಕಾರಿ ಮತ್ತೆ ಪರಪ್ಪನ ಅಗ್ರಹಾರಕ್ಕೆ ಮರಳಿದ್ದಾರೆ. ಅದು ಯಡಿಯೂರಪ್ಪ ನಿರ್ಗಮನದ ನಂತರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+