ರಾಹುಕಾಲ ನಂತರ ಬಿಎಸ್ ವೈ ಹೊರಕ್ಕೆ: ಸ್ವಾಮಿ

ಯಡಿಯೂರಪ್ಪ ಅವರ ಬಿಡುಗಡೆ ಪತ್ರ ಅಧಿಕಾರಿಗಳಿಗೆ ನೀಡಿ ಅನುಮತಿ ಪಡೆದು ರಾಹುಕಾಲದ ನಂತರ ಸುಮಾರು 4.35 ನಿಮಿಷಕ್ಕೆ ಯಡಿಯೂರಪ್ಪ ಅವರು ಬಲಗಾಲಿಟ್ಟು ಜೈಲಿನಿಂದ ಹೊರಕ್ಕೆ ಬಂದರೆ ಒಳ್ಳೆಯದು ಎಂದು ಜ್ಯೋತಿಷಿಗಳು ಸೂಚಿಸಿದ್ದಾರೆ. ಅದರಂತೆ ಪಾಲಿಸಲಾಗುವುದು ಎಂದು ಸ್ವಾಮಿ ಹೇಳಿದರು.
ಬಿಡುಗಡೆ ಸುದ್ದಿ ತಿಳಿಯುತ್ತಿದ್ದಂತೆ ಶಾಸಕರಾದ ನಂದೀಶ್ ರೆಡ್ಡಿ, ಸತೀಶ್ ರೆಡ್ಡಿ ಹಾಗೂ ಸಂಸದ ಜಿಎಸ್ ಬಸವರಾಜ್ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದ್ದು, ಅಗ್ರಹಾರದ ಜೈಲಿನ ಸುತ್ತಮುತ್ತ ಮತ್ತೆ ಪೊಲೀಸ್ ಕಾವಲು ನಿಯೋಜಿಸಲಾಗಿದೆ.












Click it and Unblock the Notifications