ಎಲೆಕ್ಟ್ರಾನಿಕ್ ಸಿಟಿಯಲ್ಲಿ ಟಾಟಾ ಟೆಕ್ಕಿ ಆತ್ಮಹತ್ಯೆ

ತುಷಾರ್ ತನ್ನ ಕಚೇರಿಯ 9ನೇ ಮಹಡಿಯಿಂದ ಜಿಗಿದು ತೀವ್ರವಾಗಿ ಗಾಯಗೊಂಡಿದ್ದ. ಕೋಮ ಸ್ಥಿತಿಯಲ್ಲಿದ್ದ ಆತನನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಪ್ರಸಕ್ತ ವರ್ಷದ ಫೆಬ್ರವರಿ ವೇಳೆಗೆ ಭಾಟಿಯಾ ಟಿಸಿಎಸ್ ಕಂಪನಿಯಲ್ಲಿ ಟೆಕ್ ಸಹಾಯಕನಾಗಿ ತರಬೇತಿ ಪಡೆಯುತ್ತಿದ್ದ. ಉದ್ಯಾನನಗರಿ ಇತ್ತೀಚೆಗೆ ಆತ್ಮಹತ್ಯಾ ನಗರವೆಂದು ಕುಖ್ಯಾತಿ ಪಡೆದುಕೊಳ್ಳುತ್ತಿದೆ. 2010ರಲ್ಲಿ 1,778 ಅತ್ಮಹತ್ಯಾ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿತ್ತು. (ಓದಿ: ಆತ್ಮಹತ್ಯಾ ನಗರಿ ಬೆಂಗಳೂರು)












Click it and Unblock the Notifications