ಹೆಣ್ಣಾಗಿ ಕನ್ನಿಗೇ ಇಲ್ಲದ ಜಾಮೀನು ಯಡಿಯೂರಪ್ಪಗೆ ಏಕೆ?

ಸ್ವತಃ ಯಡಿಯೂರಪ್ಪ ಅವರೇ 'ಇಲ್ಲ. ಇನ್ನು ನನಗೆ ಜಾಮೀನು ಸಿಗುವುದಿಲ್ಲ. ಜೈಲುವಾಸವೇ ಗಟ್ಟಿ' ಎಂದು ವಿಕ್ಟೋರಿಯಾ ಆಸ್ಪತ್ರೆಯಿಂದ ಎದ್ನೋ ಬಿದ್ನೋ ಎಂದು ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡಿರುವಾಗ ಈಗ್ಯಾಕೆ ಅವರಿಗೆ ಜಾಮೂನು ಸವಿಯುವ ಅವಕಾಶ.
ಯಡಿಯೂರಪ್ಪಗೆ ಜಾಮೀನು ಮಂಜೂರು ಮಾಡುತ್ತಾ 'ಅವರೇನು ಕೊಲೆಗಡುಕರೇ ಜಾಮೀನು ನಿರಾಕರಿಸಲು?' ಎಂದು ಘನ ನ್ಯಾಯಾಲಯ ಪ್ರಶ್ನಿಸಿದೆ. ಯಡಿಯೂರಪ್ಪ ಭೂದಾಹದಿಂದ ಭಾದಿತರಾದ ಜನಕ್ಕೆ ಇದನ್ನು ಕೇಳಿ ನಗಬೇಕೋ, ಅಳಬೇಕೋ ತಿಳಿಯದಾಗಿದೆ.
ಶುಕ್ರವಾರ ರಾಜ್ಯ ಹೈಕೋರ್ಟ್ ಎತ್ತಿದ್ದ ಈ ಪ್ರಶ್ನೆಗೆ ಅತ್ತ ದೆಹಲಿಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಕೆಲವೇ ಕ್ಷಣಗಳಲ್ಲಿ ಕನ್ನಿಮೋಳಿ ಪ್ರಕರಣದಲ್ಲಿ ಉತ್ತರ ನೀಡಿದೆ. ಕನ್ನಿಮೊಳಿಗೆ ಜಾಮೀನು ನಿರಾಕರಿಸಿರುವ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರು ನೀಡಿರುವ ಪ್ರತಿಕ್ರಿಯೆ ಇಂಟರೆಸ್ಟಿಂಗ್ ಆಗಿದೆ ನೋಡಿ - 'ವಿಚಾರಣಾಧೀನ ಕೈದಿಗಳಾದ ಕಾರಣ ಮತ್ತು ಈಗಾಗಲೇ ಆರೋಪಪಟ್ಟಿ ದಾಖಲಾಗಿರುವ ಕಾರಣ ಕನಿಮೋಳಿ ಮತ್ತು ಇತರರಿಗೆ ಜಾಮೀನು ನೀಡಬೇಕಿತ್ತು'. ಯಡಿಯೂರಪ್ಪಗೆ ಯಾಕೆ ಬೇಲ್ ನೀಡಬಾರದು ಎಂಬುದಕ್ಕೆ ಇದರಲ್ಲಿ ಉತ್ತರ ಅಡಗಿದೆ.
ಮೆರಿಟ್ ಆಫ್ ದಿ ಕೇಸ್ ಅನ್ನು ಪಕ್ಕಕ್ಕಿಟ್ಟು ನ್ಯಾಯಾನ್ಯಾಯದ ಬಗ್ಗೆ ತುಸು ಚರ್ಚಿಸೋಣ. ಇದು ಖಂಡಿತ ಒಂದೆರಡು ದಿನಕ್ಕೆ ಸತ್ತುಹೋಗುವ ವಿಷಯವಲ್ಲ. ನಾಲ್ಕಾರು ದಿನ ಇದರ ಸುತ್ತಲೇ ಚರ್ಚೆಗಳು ನಡೆಯಲಿವೆ. ಅದು ಉಚಿತವೂ ಸಹ. ನಿಮ್ಮ ನೆಚ್ಚಿನ 'ಕನ್ನಡ ವನ್ ಇಂಡಿಯಾ' ಇಂತಹ ಚರ್ಚೆಗೆ ಮುಕ್ತ ವೇದಿಕೆಯಾಗಲಿದೆ. ಅಂದಹಾಗೆ ಯಡಿಯೂರಪ್ಪಗೆ 18 ದಿನಗಳ ಹಿಂದೆ ಶನಿವಾರ ಕರಾಳವಾಗಿತ್ತು. ಇಂದು ಶುಭ ಶುಕ್ರವಾರ ಆಗಬಹುದೇ ನೋಡೋಣ!
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications