ಯಡ್ಡಿಗೆ ಜಾಮೀನು : ಬೂಕನಕೆರೆಯಲ್ಲಿ ಭುಗಿಲೆದ್ದ ಸಂಭ್ರಮ

ನ್ಯಾ. ಪಿಂಟೋ ಅವರು ಜಾಮೀನು ನೀಡಿದ್ದರ ಸುದ್ದಿ ತಿಳಿಯುತ್ತಿದ್ದಂತೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಕುಚ್ಚೆದ್ದು ಕುಣಿದರು. ಬೂಕನಕೆರೆಯಲ್ಲಿಯೂ ಯಡಿಯೂರಪ್ಪನವರ ಅಭಿಮಾನಿಗಳು ಸಿಹಿ ಹಂಚಿ ಈ ಸಂತಸವನ್ನು ಹಳ್ಳಿಯ ಜನತೆಯೊಂದಿಗೆ ಆಚರಿಸುತ್ತಿದ್ದಾರೆ.
ಆದರೆ, 4ನೇ ದೂರಿನ ವಿಚಾರಣೆ ಹೈಕೋರ್ಟಲ್ಲಿ ಇನ್ನೂ ನಡೆಯುತ್ತಿದ್ದು, ಮಧ್ಯಾಹ್ನ ವಿಚಾರಣೆ ಮುಗಿದು ಅದರಲ್ಲಿಯೂ ಜಾಮೀನು ಸಿಕ್ಕರೆ ಮಾತ್ರ ಅವರು ಪರಪ್ಪನ ಅಗ್ರಹಾರದಿಂದ ಹೊರಬರಲು ಸಾಧ್ಯ. ದೂರು ಬಂದ ಮಾತ್ರಕ್ಕೆ ಜೈಲಿಗಟ್ಟುವುದು ತರವಲ್ಲ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.












Click it and Unblock the Notifications