ಬೆಂಗಳೂರಿನ ಮೂರು ಟೆಕ್ಕಿಗಳು ಚೆನ್ನೈನಲ್ಲಿ ಸಮುದ್ರಪಾಲು

ಮೃತಪಟ್ಟವರನ್ನು ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಶಕ್ತಿ (22), ಬೆಂಗಳೂರಿನ ಜಿ. ಪ್ರವೀಣ್ (21) ಮತ್ತು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಆನಂದ್ ಭೂಷಣ್ (21) ಎಂದು ಗುರುತಿಸಲಾಗಿದೆ. ಮೂವರೂ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರುಗಳಾಗಿ ಕೆಲಸದಲ್ಲಿದ್ದರು.
ಮೂವರು ಟೆಕ್ಕಿಗಳು ರಜಾದಿನಗಳನ್ನು ಕಳೆಯಲು ಚೆನ್ನೈಗೆ ಹೋಗಿದ್ದರು. ಸಮುದ್ರತೀರದಲ್ಲಿ ಆಟವಾಡುತ್ತಿದ್ದಾಗ ಬಲವಾದ ಅಲೆಗಳು ಅವರನ್ನು ಸೆಳೆದೊಯ್ದಿವೆ. ಅವರ ಕಿರುಚಾಟ ಕೇಳಿ ತೀರದಲ್ಲಿದ್ದವರು ಶಕ್ತಿಯನ್ನು ಎಳೆದುತಂದಿದ್ದಾರೆ. ಅಡ್ಯಾರ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸುವ ದಾರಿಯಲ್ಲಿ ಶಕ್ತಿ ಕೊನೆಯುಸಿರೆಳೆದಿದ್ದಾರೆ.
ಭಾನುವಾರ ಇಳಿಸಂಜೆಯಲ್ಲಿ ಪ್ರವೀಣ್ ಶವ ಕೊಟ್ಟಿವಕ್ಕಂ ಸಮುದ್ರತೀರದಲ್ಲಿ ದೊರೆತಿದೆ. ಆನಂದ್ ಭೂಷಣ್ ಅವರ ಶವ ಸೋಮವಾರ ಬೆಳಿಗ್ಗೆ ತಿರುವನ್ಮಿಯೂರ್ ಬೀಚ್ ನಲ್ಲಿ ದೊರೆತಿದೆ. ಪೋಸ್ಟ್ ಮಾರ್ಟಂ ನಡೆಸಿದ ಮೇಲೆ ಮೂವರು ಟೆಕ್ಕಿಗಳ ಶವಗಳನ್ನು ಅವರ ವಾರಸುದಾರರಿಗೆ ಒಪ್ಪಿಸಲಾಯಿತು.












Click it and Unblock the Notifications