ಜೈ ಹೋ ಮೈಲಾರ್ಡ್ ನ್ಯಾ.ಸುಧೀಂದ್ರರಾವ್ !

ಭ್ರಷ್ಟಾಚಾರದ ವಿರುದ್ಧ ಜನಚೇತನಾ ಯಾತ್ರೆಯನ್ನೇ ಹಮ್ಮಿಕೊಂಡಿರುವ ಅಡ್ವಾಣಿ ಬಸವನಗುಡಿಗೆ ಇನ್ನೇನು ಕೆಲವೇ ಹೆಜ್ಜೆಗಳು ದೂರವಿರುವಾಗ ಅವರ ಪಕ್ಷದವರಿಗೆ ಎಂತಾ ಸಂಪನ್ನ ಗಿಫ್ಟ್ ಕೊಟ್ಟಿರಿ. ನೋಡೋಣ! ಅಡ್ವಾಣಿ ಅವರದು ನಿಜಕ್ಕೂ ಭ್ರಷ್ಟಾಚಾರದ ವಿರುದ್ಧವೇ ರಥಯಾತ್ರೆಯಾಗಿದ್ದರೆ ಬಸವನಗುಡಿ ಸಭೆಯಲ್ಲಿ ನಿಮಗೊಂದು ಶಹಭಾಸ್ ಗಿರಿ ಕೊಡುತ್ತಾರೇನೋ ಮೈಯೆಲ್ಲ ಕಿವಿಯಾಗಿ ಕೇಳಿಸಿಕೊಳ್ಳಲು ನಾವು ಕಾತುರರಾಗಿದ್ದೇವೆ.
ಅದೆಲ್ಲ ಒತ್ತಟ್ಟಿಗಿರಲಿ ಇದೇನಿದು ಭ್ರಷ್ಟಾಚಾರದ ವಿರುದ್ಧ ನಿಮ್ಮದು ಈ ಪರಿ ಸೌಮ್ಯ ಹೋರಾಟ. ಭ್ರಷ್ಟ ವ್ಯವಸ್ಥೆಯಲ್ಲಿ ಜನಸಾಮಾನ್ಯ ಹತಾಶನಾಗಿ ಮೈಮುದುಡಿಕೊಂಡು ಕುಳಿತಿದ್ದಾಗ ನೀವೇನು ಧಿಗ್ಗನೆ ಎದ್ದು ಕುಳಿತಿದ್ದೀರಿ. ರಾಗ ದ್ವೇಷಗಳಿಲ್ಲದೆ, ಕಾನೂನು ಮಂತ್ರವನ್ನು ಜಪಿಸುತ್ತಿದ್ದೀರಿ. ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ದೂರನ್ನು ಆಲಿಸಿ, ನಾಡಿನ ದೊರೆಯೇ ಆರೋಪಿ ಎಂಬುದನ್ನೂ ಲೆಕ್ಕಿಸದೆ ನ್ಯಾಯದ ಬಂಧನಕ್ಕೆ ಒಪ್ಪಿಸಿದಿರಿ.
ಇವರೆಲ್ಲ ಬರೀ ಆರೋಪಿಗಳೋ ಅಥವಾ ಮುಂದೆ ನಿಮ್ಮೆದುರೇ ಅಪರಾಧಿಗಳೂ ಸಹ ಎಂದು ಸಾಬೀತಾಗುತ್ತಾರೋ ಆ ಮಾತು ಬೇರೆ. ಆದರೆ ಸದ್ಯಕ್ಕಂತೂ ಅವರನ್ನೆಲ್ಲ ಜೈಲಿಗದುಮಿರುವುದನ್ನು ನೋಡಿ ಖಂಡಿತಾ ಪ್ರಜ್ಞಾವಂತ ಜನ ನಿಮಗೊಂದು ಸಲಾಂ ಹೇಳೋ ಹುಕಿಗೆ ಬಿದ್ದಿದ್ದಾನೆ. ಪ್ಲೀಸ್ ಅಕ್ಸಪ್ಟ್!
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications