ವೈದ್ಯಕೀಯ ಪರೀಕ್ಷೆಯ ರೂವಾರಿ ವಿನಾಯಕ ಶರಣು

ಸಿಓಡಿ ಐಜಿ ಶಂಕರ ಬಿದರಿ ಅವರು ಡಾ. ವಿನಾಯಕ ಪ್ರಸನ್ನ ಅವರ ಸುಳಿವು ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ ನಂತರ, ವಿನಾಯಕ ಪ್ರಸನ್ನ ಆತಂಕದಲ್ಲೇ ತಲೆ ಮರೆಯಿಸಿಕೊಂಡಿದ್ದರು.
ಮಂಗಳವಾರ ಬೆಳಗ್ಗೆ ಸ್ನಾನ ಪೂಜೆಗಳನ್ನು ಸಲ್ಲಿಸಿ, ಅವರ ಮನೆ ಸಮೀಪದ ಸಣ್ಣ ದುರ್ಗಮ್ಮ ಮತ್ತು ದೊಡ್ಡ ದುರ್ಗಮ್ಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ನಂತರ ನೇರವಾಗಿ ಸಮೀಪದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶರಣಾಗಿದ್ದಾರೆ.
ಪೊಲೀಸರಿಗೆ ಶರಣಾದ ಡಾ. ವಿನಾಯಕ ಪ್ರಸನ್ನ ಅವರನ್ನು ಪೊಲೀಸರು ಜೆಎಂಎಫ್ಸಿ 2ನೇ ನ್ಯಾಯಾಲಯದ ನ್ಯಾಯಾಧೀಶ ಕುಲಕರ್ಣಿ ಅವರ ಮನೆಗೆ ಕರೆದುಕೊಂಡು ಹೋದರು. ನ್ಯಾಯಾಧೀಶರು ಆರೋಪಿ ಡಾ. ವಿನಾಯಕ ಪ್ರಸನ್ನ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications