ಮಂಗಳೂರಲ್ಲಿ ಪ.ಬಂಗಾಳದ ಕಾರ್ಮಿಕರ ಬಂಧಮುಕ್ತಿ

ಮಂಗಳೂರು ರಿಫೈನರಿ ಕಾಮಗಾರಿ ನಿರ್ವಹಣೆಗೆ ದೇಬೇಸ್ ದಾಸ್ ಎಂಬ ಗುತ್ತಿಗೆದಾರ ಹದಿನೈದು ಮಂದಿಯನ್ನು ನೇಮಕಮಾಡಿಕೊಂಡು ಕಳೆದ ನಲವತ್ತೈದು ದಿನಗಳಿಂದ ದುಡಿಸುತ್ತಿದ್ದ ಎಂದು ಆರೋಪಿಸಲಾಗಿತ್ತು. ಪಶ್ಚಿಮ ಬಂಗಾಳದ ಖೇತ್ ಮಜ್ದೂರ್ ಸಂಘಟನೆಯವರು ನೀಡಿದ ಸುಳಿವಿನ ಆಧಾರದಲ್ಲಿ ಕಾರ್ಮಿಕರನ್ನು ಬಂಧಮುಕ್ತಗೊಳಿಸಲಾಯಿತು.
ಆರಂಭದಲ್ಲಿ ದಿನಕ್ಕೆ ಎಂಟು ಗಂಟೆ ಕೆಲಸ ಮಾಡಿಸುವುದಾಗಿ ಹೇಳಿದ್ದ ಗುತ್ತಿಗೆದಾರ ದಿನಕ್ಕೆ 14ರಿಂದ 16 ಗಂಟೆ ದುಡಿಸುತ್ತಿದ್ದರು ಎಂದು ಕಾರ್ಮಿಕರು ದೂರಿದ್ದರು.











Click it and Unblock the Notifications