ಸಂಜೆಯೊಳಗೆ ಪರಪ್ಪನ ಅಗ್ರಹಾರಕ್ಕೆ ಯಡಿಯೂರಪ್ಪ

ಅರಕೆರೆ, ಉತ್ತರಹಳ್ಳಿ ಡಿನೋಟಿಫಿಕೇಶನ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಜಗದೀಶ್ ನಾಯ್ಡು ಜೊತೆಗೆ ಜೈಲುಕೋಣೆ ಹಂಚಿಕೊಳ್ಳವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯ ಯಡಿಯೂರಪ್ಪ ಅವರ ಜಾಮೀನು ಅರ್ಜಿ ನಿರಾಕರಿಸಿದ್ದು, ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ.
ಈ ವಿರೋಧಿಗಳಿಗೆ ನಿರೀಕ್ಷಿತ ಅಥವಾ ಬಿಜೆಪಿಗೆ ಅನಿರೀಕ್ಷಿತವಾಗಿದ್ದ ಬೆಳವಣಿಗೆಯಿಂದಾಗಿ ಸಂತಸದ ಮತ್ತು ದುಃಖದ ವಾತಾವರಣ ಸೃಷ್ಟಿಯಾಗಿದೆ. ತಮಗೆ ಜಾಮೀನು ಸಿಕ್ಕೇಸಿಗುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸುತ್ತಲೇ ಬಂದಿದ್ದ ಯಡಿಯೂರಪ್ಪನವರ ಮೇಲೆ ಆಕಾಶವೇ ಕಳಚಿಬಿದ್ದಂತಾಗಿದೆ.











Click it and Unblock the Notifications