ನಿಷ್ಕಳಂಕ, ಶುದ್ಧ, ಆಪಾದನೆರಹಿತ ವ್ಯಕ್ತಿಗಳೇ ಇಲ್ಲವೆ ರಾಜ್ಯದಲ್ಲಿ?
ರಾಜ್ಯದಲ್ಲಿ ಇತ್ತೀಚೆಗೆ ಶುರುವಾಗಿರುವ ರಾಜೀನಾಮೆ, ಬಂಧನಗಳ ಪರ್ವವನ್ನು ನೋಡಿದಾಗ ನಾಡು ಎತ್ತ ಸಾಗಿದೆ ಎಂಬ ಆತಂಕ ಮನೆ ಮಾಡುತ್ತದೆ. ನಾಡಿನ ದೊರೆ ಯಡಿಯೂರಪ್ಪ, ನ್ಯಾ. ಶಿವರಾಜ್ ವಿ ಪಾಟೀಲ್, ಡಾ. ಎಚ್ಎನ್ ಕೃಷ್ಣ, ನ್ಯಾ. ಗುರುರಾಜನ್ ಹೀಗೆ ಸಾಲು ಸಾಲಾಗಿ ರಾಜೀನಾಮೆ ನೀಡಿ ನಿರ್ಗಮಿಸುತ್ತಿದ್ದು. ನಾಡಿನ ಗೌರವ ಮಣ್ಣು ಪಾಲಾಗುತ್ತಿರುವುದನ್ನು ನೋಡಿ ಜನಸಾಮಾನ್ಯರು ನಿಜಕ್ಕೂ ಖೇದಗೊಂಡಿದ್ದಾರೆ.
ನಾಡಿನ ದೊರೆಯಾಗಿ ಸದಾನಂದ ಗೌಡರೇನೋ ಪ್ರತಿಷ್ಠಾಸಿದರು. ಆದರೆ ಅಷ್ಟೇ ಮಹತ್ವದ ಲೋಕಾಯುಕ್ತ ನೇಮಕ ಯಾವಾಗ? ಈ ಮಧ್ಯೆ, ಒಬ್ಬ ಉಪ ಲೋಕಾಯುಕ್ತರೂ ಇಲ್ಲದೆ ಇರುವ ಮತ್ತೊಬ್ಬ ಉಪ ಲೋಕಾಯುಕ್ತ ಸಜ್ಜನರೇ ಹೆಚ್ಚುವರಿ ಹೊಣೆ ನಿಭಾಯಿಸಬೇಕಾಗಿದೆ.
ಇದೆಲ್ಲಕ್ಕಿಂತ ಆತಂಕದ ವಿಷಯವೆಂದರೆ ಬಹುತೇಕ ಮೇಲೆ ಉಲ್ಲೇಖಗೊಂಡ ಮಹಾಮಹಿರನ್ನೆಲ್ಲ ಮನೆಗೆ ಕಳಿಸಿದ್ದು ,ಆಹಿತಿ ಹಕ್ಕು ಕಾಯಿದೆ ಎಂಬ ಪ್ರಬಲ ಅಸ್ತ್ರ. ಆದರೆ ಇಂದು ಆ ಅಸ್ತ್ರ ಝಳಪಿಸೋಣ ಎಂದರೆ ಆರ್ ಟಿಐ ಎಂಬುದು ಯಜಮಾನನಿಲ್ಲದ ಮನೆಯಂತಾಗಿದೆ.
ಯಾರಿಗೆ ಹೇಳಿಕೊಳ್ಳೋಣ ನಮ್ಮ ದೂರನ್ನು. ಲೋಕ ಕಲ್ಯಾಣಕ ಡಾ. ಕೃಷ್ಣ ಎಂಬ ಭ್ರಷ್ಟ ಸೆರೆಮನೆ ಸೇರಿಕೊಂಡ ಮೇಲೆ ಮಾಹಿತಿ ಹಕ್ಕು ಆಯುಕ್ತರ ಸ್ಥಾನ ಖಾಲಿಯಾಗಿದೆ. ಹಾಗೆಯೇ ನಾಡಿನ ಪ್ರಜ್ಞಾವಂತರ ಮನಸುಗಳೂ...