ಕುಮಟಾ ಬಳಿ ಗದ್ದೆಗೆ ಬಸ್ ಉರುಳಿ 7 ಜನರ ದುರ್ಮರಣ

ರಾತ್ರಿ ಭಾರೀ ಮಳೆ ಸುರಿಯುತ್ತಿದ್ದಂಥ ಸಮಯದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ರಸ್ತೆಬದಿಯ ಭತ್ತದ ಗದ್ದೆಗೆ ಬಸ್ ಉರುಳಿದೆ. ಆರು ಜನ ಸ್ಥಳದಲ್ಲಿಯೇ ಮೃತರಾದರೆ, ಒಂದು ವರ್ಷದ ಮಗು ಆಸ್ಪತ್ರೆಯಲ್ಲಿ ಅಸುನೀಗಿದೆ. ಗಾಯಗೊಂಡವರನ್ನು ಕುಮಟಾದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸತ್ತವರನ್ನು ಬಸ್ ನಿರ್ವಾಹಕ ರಾಮಪ್ರಸಾದ ತಲ್ವಾರ್ (37), ರಸೂಲ್ ಅಲಿ ಖಾನ್ (27), ಅಶೋಕ್ ರೇವಣಕರ್ (49), ಶೋಭಾ ಶಾಸ್ತ್ರಿ (47), ಮೃತ್ಯುಂಜಯ (35), ನಾಗರಾಜ ನಾಯಕ್ (45) ಮತ್ತು ನಾಗರಾಜ ಅವರ ಮಗಳು ರಕ್ಷಿತಾ ಎಂದು ಗುರುತಿಸಲಾಗಿದೆ. ಸೋಮವಾರವೆ ಆಂಧ್ರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಯಾದಗಿರಿಯ 7 ಜನ ಅಸುನೀಗಿದ್ದರು.












Click it and Unblock the Notifications