ಭೀಕರ ಅಪಘಾತ : ಸಕ್ಕರೆ ತುಂಬಿದ್ದ ಲಾರಿ, ಚಾಲಕ ಭಸ್ಮ

ಲಾರಿಯಲ್ಲಿದ್ದ ವ್ಯಕ್ತಿ ಗುರುತಿಸಲಾಗದಷ್ಟು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದಾನೆ. ಡಿಕ್ಕಿ ಹೊಡೆದ ಲಾರಿ 16 ಕ್ವಿಂಟಾಲ್ ಸಕ್ಕರೆ ತುಂಬಿಕೊಂಡು ಆಂಧ್ರಪ್ರದೇಶದ ತಾಂಡೂರಿಗೆ ಹೋಗುತ್ತಿತ್ತು ಎನ್ನಲಾಗಿದೆ. ಗೊಬ್ಬರ ತುಂಬಿದ ಇನ್ನೊಂದು ಲಾರಿ (CTW-6276) ಯಾದಗಿರಿ ಮೂಲದ ಖುರ್ಷಿದ್ ಎನ್ನುವವರಿಗೆ ಸೇರಿದೆ.
ಘಟನೆ ನಡೆದ ಕೂಡಲೇ ಲಾರಿ ಚಾಲಕ ಹಾಗೂ ಕ್ಲೀನರ್ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಇದುವರೆಗೂ ಯಾವೊಬ್ಬ ಲಾರಿ ಮಾಲಿಕರು ಆಗಮಿಸದಿರುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications