ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಬುಲನ್ಸ್ ಮುಷ್ಕರಕ್ಕೆ ಮುಖ್ಯಮಂತ್ರಿ ಚುಚ್ಚುಮದ್ದು

By Prasad
|
Google Oneindia Kannada News

108 ambulance service in Karnataka
ಬೆಂಗಳೂರು, ಸೆ. 27 : ತಮ್ಮನ್ನು ಸರಕಾರಿ ನೌಕರರಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟು ಇಂದು ರಾತ್ರಿಯಿಂದ ಸತ್ಯಾಗ್ರಹ ನಡೆಸಲು ಉದ್ದೇಶಿಸಿರುವ 108 ತುರ್ತು ಚಿಕಿತ್ಸೆ ಆಂಬುಲನ್ಸ್ ನೌಕರರ ಎರಡು ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ವಾಗ್ದಾನ ನೀಡಿದ್ದಾರೆ.

ನಿರಶನದಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವುದರಿಂದ ಕೂಡಲೆ ಸತ್ಯಾಗ್ರಹವನ್ನು ಕೈಬಿಡಬೇಕೆಂದು ಅವರು ನೌಕರರನ್ನು ಆಗ್ರಹಿಸಿದರು. ರಾಜ್ಯದಲ್ಲಿ ಒಟ್ಟು 517 ತುರ್ತು ಚಿಕಿತ್ಸಾ ವಾಹನಗಳಿವೆ. ನೌಕರರು ದಿನಕ್ಕೆ 10ರಿಂದ 12 ಗಂಟೆ ದುಡಿಯುತ್ತಾರೆ. ಅವರ ಆಗ್ರಹಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಅವರು ನುಡಿದರು.

ಆಂಬುಲನ್ಸ್ ನೌಕರರು ಮುಂದಿಟ್ಟಿರುವ ನಾಲ್ಕು ಬೇಡಿಕೆಗಳಲ್ಲಿ ಒಂದೆರಡು ನ್ಯಾಯಸಮ್ಮತವಾಗಿವೆ. ಆದ್ದರಿಂದ ಕೂಡಲೆ ಆ ಬೇಡಿಕೆಗಳನ್ನು ಈಡೇರುಸುತ್ತೇವೆ. ಆದರೆ, ಕೂಡಲೆ ಎಲ್ಲ ಬೇಡಿಕೆಗಳನ್ನು ಪೂರೈಸುವುದು ಸಾಧ್ಯವಿಲ್ಲ ಎಂದು ಅವರು ನೌಕರರನ್ನು ಉದ್ದೇಶಿಸಿ ಹೇಳಿದರು.

English summary
108 ambulance service workers in Karnataka have decided to go on strike from September 27 night with 4 demands. Chief Minister Sadananda Gowda has assured to fulfil 2 out of 4 demands and has requested them not to go on strike in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X