ರೆಡ್ಡಿ ವಿರುದ್ಧ ಸಿಬಿಐ ತನಿಖೆಗೆ ನ್ಯಾ.ಹೆಗ್ಡೆಯೇ ಕಾರಣ

ಅಕ್ರಮ ಗಣಿಗಾರಿಕೆ ಬಗ್ಗೆ ನ್ಯಾ. ಹೆಗ್ಡೆ ಅವರು ಸಿದ್ಧಪಡಿಸಿದ ವರದಿ ಸುಪ್ರೀಂಕೋರ್ಟಿನ ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ) 'ಅತ್ಯುತ್ತಮ ಗೈಡ್' ಆಗಿ ರೆಡ್ಡಿಯ ಅಕ್ರಮ ಗಣಿಗಾರಿಕೆಯ ಆಳ-ಅಗಲಗಳನ್ನು ಪರಿಚಯಿಸಿದೆ.
'ನಾನು ಹೇಳಿರಲಿಲ್ವಾ! ಕರ್ನಾಟಕದಲ್ಲಿ ರೆಡ್ಡಿಯ ಗಣಿಗಾರಿಕೆ ದಂಧೆ ಅವ್ಯಾಹತವಾಗಿ ನಡೆದಿದೆ ಎಂದು. ಕರ್ನಾಟಕದಲ್ಲಿ ಒಂದಿಂಚು ಭೂಮಿಯಲ್ಲೂ ಗಣಿಗಾರಿಕೆ ನಡೆಸಿಲ್ಲ ಎಂದು ರೆಡ್ಡಿ ಎಷ್ಟೇ ಬೊಂಬಡಾ ಹೊಡೆದಿದ್ದರೂ ನಾನು ದಾಖಲೆ ಸಮೇತ ಅದನ್ನು ರುಜುವಾತುಪಡಿಸಿದ್ದೆ. ಈಗ ನನ್ನ ವರದಿ ಕೆಲಸ ಮಾಡುತ್ತಿದೆ' ಎಂದು ನ್ಯಾ. ಹೆಗ್ಡೆ ಅವರು ಸುಪ್ರೀಂಕೋರ್ಟ್ ನಿರ್ದೇಶನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications