ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತ ಬಿ ಉಗ್ರಾಣ ತೆರೆಯುವುದು ಬೇಡ: ಸುಪ್ರೀಂಕೋರ್ಟ್

By Srinath
|
Google Oneindia Kannada News

supreme-court-no-to-open-padmanabha-b-vault
ನವದೆಹಲಿ, ಸೆ. 22: ಕೇರಳದ ತಿರುವನಂತಪುರದಲ್ಲಿರುವ ಅನಂತಪದ್ಮನಾಭಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿರುವ 'ಬಿ" ಉಗ್ರಾಣದ ದ್ವಾರ ತೆಗೆಯುವುದು ಬೇಡ ಎಂದು ಸುಪ್ರೀಂಕೋರ್ಟ್‌ ಗುರುವಾರ ಮಹತ್ವದ ಆದೇಶ ನೀಡಿದೆ.

ಇನ್ನು ಮೂರು ತಿಂಗಳು ಈ ವಿಷಯದ ಬಗ್ಗೆ ಮಾತಾಡುವುದು ಬೇಡ. ಮೊದಲು ಈಗಾಗಲೇ ಪತ್ತೆ ಹಚ್ಚಿರುವ ಅನಂತ ಸಂಪತ್ತಿನ ಮೌಲ್ಯಮಾಪನವನ್ನು ಸರಿಯಾಗಿ ಮಾಡಿ ಮುಗಿಸಿ. ಆಮೇಲೆ ಬಿ ಉಗ್ರಾಣದ ಬಗ್ಗೆ ನೋಡುವ ಎಂದು ಸುಪ್ರೀಂ ನ್ಯಾಯಪೀಠ ಸೂಚಿಸಿದೆ.

ಇದೇ ವೇಳೆ, ಇಡೀ ಸಂಪತ್ತಿನ ಭದ್ರತೆ ಕಾಪಾಡುವುದು ರಾಜ್ಯ ಸರಕಾರದ ಜವಾಬ್ದಾರಿ. ಈ ಬಾಬತ್ತಿಗೆ ರಾಜಮನೆತನವೂ 25 ಲಕ್ಷ ರುಪಾಯಿ ಸಂದಾಯ ಮಾಡಬೇಕು. ಪತ್ತೆಯಾಗಿರುವ ರಹಸ್ಯ ನಿಧಿಯ ತಪಾಸಣೆ ನಡೆದು, ಡಿಜಿಟಲ್ ದಾಖಲಾತಿ ನಡೆಸಬೇಕು. ಇದು ರಾಜ್ಯ ಸರಕಾರದ ಅಧೀನದಲ್ಲೇ ನಡೆಯಲಿ ಎಂದೂ ನ್ಯಾಯಪೀಠ ಹೇಳಿದೆ.

English summary
Kerala Padmanabhaswamy Treasure: Supreme Court has categorically declined to open B vault. Instead, first look into how to protect the unearthed huge wealth. Also, Raja Marthanda Family should pay Rs. 25 lakhs towards security of the wealth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X