ವೀರಪ್ಪನ್ ಸಾವಿನ ಲಾಭ ಯಾರಿಗಾಯ್ತು?:ವಿಕಿಲೀಕ್ಸ್ ವರದಿ
2004ರಲ್ಲಿ ವೀರಪ್ಪನ್ ಗುಂಡೇಟಿಗೆ ಬಲಿಯಾದ ನಂತರ ಅವನ ಉತ್ತರಾಧಿಕಾರಿ ಯಾರಾಗುತ್ತಾರೆ ಎಂಬ ವಿಷಯದ ಬಗ್ಗೆ ಚೆನ್ನೈನಲ್ಲಿರುವ ಅಮೆರಿಕ ದೂತವಾಸ ಕಚೇರಿ ಹಿರಿಯ ಅಧಿಕಾರಿ ರಿಚರ್ಡ್ ಡಿ ಹೇಯ್ನ್ಸ್ ಜೊತೆ ತಮಿಳುನಾಡಿನ ಐಎಎಸ್ ಅಧಿಕಾರಿ ಪಿಚಾಂಡಿ ಅವರು ಚರ್ಚೆ ನಡೆಸಿದ್ದರು.
ವೀರಪ್ಪನ್ ಕಾರ್ಯಕ್ಷೇತ್ರವಾದ ಆರ್ಥಿಕವಾಗಿ ದುರ್ಬಲವಾಗಿರುವ ಧರ್ಮಪುರಿ ಜಿಲ್ಲೆಯಲ್ಲಿ ಮತ್ತೊಬ್ಬ ನರಹಂತಕ ಹುಟ್ಟಿಕೊಳ್ಳುವ ಆತಂಕ ಎದುರಾಗಿತ್ತು.
ವೀರಪ್ಪನ್ ಕೊಂದ ನಂತರ ಅರಣ್ಯ ಸಂಪತ್ತಿನ ಮೇಲೆ ಅಧಿಕಾರ ಹೊಂದಲು ತಮಿಳುನಾಡು ಸರ್ಕಾರಕ್ಕೆ ಸುಲಭವಾಗುತ್ತದೆ ಎಂದು ಎನಿಸಲಾಗಿತ್ತು.
ವೀರಪ್ಪನ್ ನಂತರ ನಿಗೂಢವಾದ ದಟ್ಟಾರಣ್ಯದ ಮೇಲೆ ಪ್ರಭುತ್ವ ಸಾಧಿಸಲು ಆಂಧ್ರ ಪ್ರದೇಶದಿಂದ ನಕ್ಸಲೈಟ್ ಗಳು ವಲಸೆ ಬರುವ ಸಾಧ್ಯತೆಯೂ ಇತ್ತು.
ಮೂಲ ಸೌಕರ್ಯಗಳ ಕೊರತೆ ಅನುಭವಿಸುತ್ತಿರುವ ಜಿಲ್ಲೆಯ ಜನರನ್ನು ಎಚ್ಚರಿಸಿ, ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಮಾಡಲು ನಕ್ಸಲರು ಯೋಜಿಸಿದ್ದರು.
ಆದರೆ, ನಕ್ಸಲರಿಗೆ ವೀರಪ್ಪನ್ ಗೆ ಇದ್ದಷ್ಟು ಅರಣ್ಯ ಪರಿಸರದ ಬಗ್ಗೆ ಜ್ಞಾನವಿರಲಿಲ್ಲ. ಜನರನ್ನು ಒಂದುಗೂಡಿಸಿದರೂ ನಕ್ಸಲರ ಕಾರ್ಯವ್ಯಾಪ್ತಿ ಕಿರಿದಾಗಿತ್ತು. ಆದರೆ, ಈಗ ಏನಾಗಿದೆ. ..