ರೆಡ್ಡಿಗೆ ಹೈದರಾಬಾದಿ ಬಿರಿಯಾನಿ, ಬೆಣ್ಣೆಯ ಕೋಳಿ ಮಾಂಸ

reddy-given-hyderabadi-chicken-biryani-cbi
ಹೈದರಾಬಾದ್, ಸೆ.16: ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಂಧಿತರಾಗಿರುವ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಬಾವ ಶ್ರೀನಿವಾಸ ರೆಡ್ಡಿ ಅವರು ಇನ್ನೂ ನಾಲ್ಕು ರಾತ್ರಿಗಳನ್ನು ಸಣ್ಣ ಲಾಕಪ್‌ನಲ್ಲೇ ಕಳೆಯಬೇಕಿದೆ.

ಚುಂಚುಲಗುಡ ಕಾರಾಗೃಹದಿಂದ ಮಂಗಳವಾರ ಕರೆತಂದ ರೆಡ್ಡಿದ್ವಯರನ್ನು ಕೋಠಿ ಪ್ರದೇಶದಲ್ಲಿರುವ ಸಿಬಿಐನ ಪ್ರಾದೇಶಿಕ ಕಚೇರಿಯಲ್ಲಿ ಕೆಲವು ಸಮಯ ಇರಿಸಲಾಗಿತ್ತು. ಅಲ್ಲೇ ಅವರಿಗೆ ಸಮೀಪದ ಹೋಟೆಲ್‌ನಿಂದ ಹೈದರಾಬಾದಿ ಬಿರಿಯಾನಿ, ಬೆಣ್ಣೆಯ ಕೋಳಿ ಮಾಂಸದ ಆಹಾರವನ್ನು ತರಸಿಕೊಡಲಾಯಿತು. ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿಗಳನ್ನು ಆರು ದಿನಗಳ ಮಟ್ಟಿಗೆ ವಿಚಾರಣೆಗಾಗಿ ಸಿಬಿಐ ವಶಕ್ಕೆ ಮಂಗಳವಾರ ನೀಡಿದೆ.

ಇಲ್ಲಿನ ಬಷೀರ್ ಬಾಗ್ ಪ್ರದೇಶದಲ್ಲಿರುವ ಪೊಲೀಸ್ ನಿಯಂತ್ರಣ ಕೇಂದ್ರದಲ್ಲಿನ ಕೇಂದ್ರೀಯ ಅಪರಾಧ ಠಾಣೆಯ (ಸಿಸಿಎಸ್) ಸಣ್ಣ ಲಾಕಪ್‌ನಲ್ಲಿ ರೆಡ್ಡಿದ್ವಯರನ್ನು ಇರಿಸಲಾಗಿದೆ. ಜನ ನಿಬಿಡವಾದ, ಅಧಿಕ ವಾಹನ ಸಂಚಾರ ಇರುವ ಈ ಪ್ರದೇಶ ಸದಾ ಗಿಜಿಗಿಡುತ್ತಿರುತ್ತದೆ. ಇಲ್ಲಿ ಪದೇಪದೆ ಅಪರಾಧ ಎಸಗುವ ಆರೋಪಿಗಳ ವಿಚಾರಣೆಯನ್ನೂ ನಡೆಸಲಾಗುತ್ತದೆ.

ರೆಡ್ಡಿದ್ವಯರು ಬಯಸುವ ಯಾವುದೇ ವಿಶೇಷ ಸೌಲಭ್ಯಗಳು ಇಲ್ಲಿಲ್ಲ. ಕುಖ್ಯಾತ ಅಪರಾಧಿಗಳನ್ನು ಇರಿಸುವ ಇಲ್ಲಿನ ಲಾಕಪ್‌ಗಳಲ್ಲಿ ಹಾಸಿಗೆಯಾಗಲಿ, ಕೋಣೆಗೆ ಹೊಂದಿಕೊಂಡ ಶೌಚಾಲಯವಾಗಲಿ ಇಲ್ಲ. ನೆಲದ ಮೇಲೆ ಹಾಸಲು ಹೊದ್ದಿಕೆ ಮತ್ತು ದಿಂಬನಷ್ಟೇ ಆರೋಪಿಗಳಿಗೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+