ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಗೆ ಅಡ್ವಾಣಿ, ಜಯಲಲಿತಾ ಸಾಥ್ !

'ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ಮೋದಿ' ಎಂಬುದನ್ನು ಬಿಂಬಿಸಿಕೊಳ್ಳಲು ಈ ಉಪವಾಸ ಸತ್ಯಾಗ್ರಹ ಅವರಿಗೆ ನೆರವಾಘಲಿದೆ. ಹೀಗಾಗಿ ತಮ್ಮಉಪವಾಸ ವ್ರತಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಹಲವು ಹಿರಿಯ ನಾಯಕರಿಗೆ ಮೋದಿ ಆಹ್ವಾನ ನೀಡಿದ್ದಾರೆ.
ಈ ಪೈಕಿ ಎಲ್ ಕೆ ಆಡ್ವಾಣಿ, ನಿತಿನ್ ಗಡ್ಕರಿ, ರಾಜ್ನಾಥ್ಸಿಂಗ್, ನಟಿ ಸ್ಮೃತಿ ಇರಾನಿ, ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಹಾಜರಾಗುವ ಸಾಧ್ಯತೆ ಇದೆ. ಇವರ ಜೊತೆಗೆ ತಮಿಳುನಾಡು ಸಿಎಂ ಜಯಲಲಿತಾ, ಶಿವಸೇನಾ ನಾಯಕ ಉದ್ಧವ್ ಠಾಕ್ರೆ, ಎಂಎನ್ಎಸ್ ನಾಯಕ ರಾಜ್ ಠಾಕ್ರೆ ಸೇರಿದಂತೆ ಇತರೆ ಕೆಲ ಗಣ್ಯರೂ ಭಾಗಿಯಾಗುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications