ಸೆ.20 ಕ್ಕೆ ಚುನಾವಣೆ: ರೆಡ್ಡಿಗಳ ಕೈಜಾರಲಿದೆ KMF

ಆನಂತರದ ಬೆಳವಣಿಗೆಗಳು ಬಿಜೆಪಿಗೆ ವರವಾಗಿ ಪರಿಣಮಿಸಿವೆ. ಬಿಜೆಪಿ, ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಯವಾಗಿ ರೆಡ್ಡಿ ಕುಟುಂಬದಿಂದ ದೂರವಾಗತೊಡಗಿತು. ಇದೀಗ ಕರ್ನಾಟಕ ಹಾಲು ಮಹಾಮಂಡಲದ (KMF) ಅಧ್ಯಕ್ಷ ಸ್ಥಾನ ಸೋಮಶೇಖರ ರೆಡ್ಡಿ ಕೈಯಲ್ಲಿ ಉಳಿಯುವುದೋ ಅಥವಾ ಕೈಬಿಡುವುದೋ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಅತ್ತ, ಕೊಪ್ಪಳ ಉಪ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಬೆವರಿಳಿಸುತ್ತಿದ್ದರೆ, KMF ನಿರ್ದೇಶಕರುಗಳ ಮಧ್ಯೆ ಅಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿ ಹೋರಾಟ ನಡೆದಿದೆ. ಅಂದಹಾಗೆ, ಇದೇ ಸೆಪ್ಟೆಂಬರ್ 20ರಂದು KMF ಚುನಾವಣೆ ನಿಗದಿಯಾಗಿದೆ.
ಅದೊಮ್ಮೆ ಸೋಮಶೇಖರ ರೆಡ್ಡಿ ಸೋತರೆ ದೊಡ್ಡಗೌಡರಿಗೆ ಹಾಲು ಕುಡಿದಷ್ಟು ಸಂತೋಷವಾಗುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಇದೇ ರೆಡ್ಡಿ ಸೋದರರು ದೇವೇಗೌಡರ ಪುತ್ರರತ್ನ ರೇವಣ್ಣರನ್ನು ಅಧಿಕಾರ ವಂಚಿತರನ್ನಾಗಿಸಿದ್ದರು.
ಎರಡೂವರೆ ವರ್ಷಗಳ ಹಿಂದೆ ಹಠ ಮಾಡಿ ಈ ಹುದ್ದೆಯನ್ನು ರೆಡ್ಡಿ ಸಹೋದರರಲ್ಲಿ ಒಬ್ಬರಾದ ಗಾಲಿ ಸೋಮಶೇಖರ ರೆಡ್ಡಿ ಅವರಿಗೆ KMF ದಕ್ಕಿಸಿಕೊಳ್ಳಲಾಗಿತ್ತು. ಇದೀಗ ರೆಡ್ಡಿಯ ಅಧಿಕಾರದ ಅವಧಿ ಮುಗಿಯುತ್ತಿದೆ. ನೂತನ ಅಧ್ಯಕ್ಷರ ಆಯ್ಕೆಗಾಗಿ ಸೆ. 20ರಂದು ಚುನಾವಣೆ ನಿಗದಿಯಾಗಿದೆ.












Click it and Unblock the Notifications