ಸಿಬಿಐಗೆ ನೆರವಾದ ಸಂಡೂರು ನ್ಯಾಯಾಲಯದ ವಾರೆಂಟ್‌

reddy-sandur-warrant-cbi-tightens-noose
ಬೆಂಗಳೂರು, ಸೆ.12: ಜನಾರ್ದನ ರೆಡ್ಡಿ ತಮ್ಮ ವಿರುದ್ಧದ ಕೇಸುಗಳನ್ನು ಕಾಲ ಕಾಲಕ್ಕೆ ಚುಕ್ತಾ ಮಾಡಿಕೊಂಡಿದ್ದರೆ ಬಹುಶಃ ಅವರು ಚಂಚಲಗೂಡ ಜೈಲುಪಾಲಾಗಬೇಕಾದ ಜರೂರತ್ತು ಬರುತ್ತಿರಲಿಲ್ಲ.

ಕಾಲ ಕಾಲಕ್ಕೆ ವಾರಂಟ್ ಗಳನ್ನು ಗೌರವಿಸಿ, ನ್ಯಾಯಾಲಯಗಳಿಗೆ ಹಾಜರಾಗಿ ಪ್ರಕರಣಗಳಿಂದ ಮುಕ್ತಿ ಹೊಂದಿದ್ದರೆ ಕನಿಷ್ಠ ಜಾಮೀನು ಆದರೂ ದೊರಕುತ್ತಿತ್ತು. ಆದರೆ ಎಲ್ಲವನೂ ಧಿಕ್ಕರಿಸಿದ್ದೇ ಅವರಿಗೆ ಮುಳುವಾಗಿದೆ ಎನ್ನುತ್ತಾರೆ ತಜ್ಞ ವಕೀಲರು.

ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ (ವಿಚಾರಣಾಧೀನ ಕೈದಿ ನಂ. 697) ಜಾಮೀನಿಗೆ ಸುಗ್ಗಲಮ್ಮ ದೇವಸ್ಥಾನದ ನೆಲಸಮ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಸಂಡೂರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯೇ ಅಡ್ಡಿಯಾಗಿ ಪರಿಣಮಿಸಿದೆ.

ರೆಡ್ಡಿಗೆ ಜಾಮೀನು ನೀಡದಂತೆ ಹೈದರಾಬಾದ್‌ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿರುವ ಆಕ್ಷೇಪಣಾ ಅರ್ಜಿಯಲ್ಲಿ ಸುಗ್ಗಲಮ್ಮ ದೇವಸ್ಥಾನದ ನೆಲಸಮ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ಪ್ರಸ್ತಾಪಿಸಲಾಗಿದೆ.

ಬಳ್ಳಾರಿ ಗ್ರಾಮೀಣ ಪೊಲೀಸರು 2006ರಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ 7 ಮಂದಿ ವಿರುದ್ಧ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿ ಹಾಗೂ ಅದಕ್ಕೆ ಪೂರಕವಾಗಿ ಸಂಗ್ರಹಿಸಿದ್ದ ಸಾಕ್ಷ್ಯಾಧಾರಗಳು, ದಾಖಲೆಗಳನ್ನು ಆಧಾರವಾಗಿಟ್ಟುಕೊಂಡೇ ರೆಡ್ಡಿಯನ್ನು ಸಿಬಿಐ ತನ್ನ ಬಲೆಗೆ ಬೀಳಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+