ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಸ್‌ಪೆಕ್ಟರ್ ರತ್ನಾಕರ ಶೆಟ್ಟಿ ಅಮಾನತು; ಇನ್ನೂ ನಾಪತ್ತೆ

By Srinath
|
Google Oneindia Kannada News

inspector-rathnakar-suspended-jyothiprakash-mirji
ಬೆಂಗಳೂರು, ಸೆ. 9: ಲೋಕಾಯುಕ್ತ ಪೊಲೀಸರು ತನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೆಂದು ಹೆದರಿ, ಕಳ್ಳನಂತೆ ಓಡಿಹೋಗಿರುವ ಅಮೃತಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ರತ್ನಾಕರ ಶೆಟ್ಟಿ ಮತ್ತು ಅವರ ಶಿಷ್ಯ, ಕಾನ್‌ಸ್ಟೆಬಲ್ ಸುಹೇಲನನ್ನು ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಅವರು ಗುರುವಾರ ಅಮಾನತುಗೊಳಿಸಿದ್ದಾರೆ.

ಈ ಮಧ್ಯೆ, ಇನ್ಸ್‌ಪೆಕ್ಟರ್ ರತ್ನಾಕರ ಮತ್ತು ಸುಹೇಲ್ ಈ ಕ್ಷಣದವರೆಗೂ ಪತ್ತೆಯಾಗಿಲ್ಲ. ಬೆಂಗಳೂರು ಪೊಲೀಸರು ಮತ್ತು ಲೋಕಾಯುಕ್ತರು ಇಬ್ಬರ ಬಂಧನಕ್ಕೆ ಶೋಧ ನಡೆಸಿದ್ದಾರೆ. ಇಬ್ಬರ ಮೊಬೈಲುಗಳೂ ಸ್ವಿಚ್ ಆಫ್ ಆಗಿವೆ. ಜತೆಗೆ ರತ್ನಾಕರ ಹೊತ್ತೊಯ್ದಿರುವ ಇಲಾಖೆಯ ವಾಕಿಟಾಕಿ ಸಹ ಸ್ವಿಚ್ ಆಫ್ ಆಗಿದೆ. ಇಬ್ಬರೂ ಕರ್ತವ್ಯಕ್ಕೂ ಹಾಜರಾಗಿಲ್ಲ.

'ಇಬ್ಬರನ್ನೂ ಸಂಪರ್ಕಿಸಲು ಯತ್ನಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಲಂಚ ಪ್ರಕರಣ ಆರೋಪ ಕೇಳಿಬಂದಿರುವುದರಿಂದ ಜತೆಗೆ ಕರ್ತವ್ಯಲೋಪ ಎಸಗಿರುವುದರಿಂದ ಇನ್ಸ್‌ಪೆಕ್ಟರ್ ರತ್ನಾಕರ ಮತ್ತು ಸುಹೇಲನನ್ನು ಅಮಾನತು ಮಾಡಲಾಗಿದೆ' ಎಂದು ಮಿರ್ಜಿ ತಿಳಿಸಿದ್ದಾರೆ.

English summary
Police inspector Rathnakar Shetty and a constable who are on the run from the Lokayukta sleuths are suspended says Police Commissioner Jyothi Prakash Mirji, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X