ಜೈಲು ಶಿಕ್ಷೆಯಿಂದ ಪಾರಾದ ನಟ ಶ್ರೀನಿವಾಸಮೂರ್ತಿ

ಐದು ವರ್ಷದ ಕೆಳಗೆ ಶ್ರೀನಿವಾಸಮೂರ್ತಿ ಮೇಲೆ ಮುರಳಿಕೃಷ್ಣ ಎನ್ನುವವರು ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿದ್ದರೆಂದು ಆರೋಪಿಸಿ ದೂರು ದಾಖಲಿಸಿದ್ದರು. ಶ್ರೀನಿವಾಸಮೂರ್ತಿ ಮತ್ತು ಇನ್ನೋರ್ವ ಆರೋಪಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಘನ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಏನಿದು ಕೇಸ್? : 1987ರಲ್ಲಿ ಬಿಡುಗಡೆಗೊಂಡಿದ್ದ 'ಬಾಳನೌಕೆ' ಸಿನಿಮಾ ವಿತರಣೆಗೆ ಸಂಬಂಧಿಸಿದಂತೆ ಶ್ರೀನಿವಾಸಮೂರ್ತಿ ಐದು ಲಕ್ಷ ಮೊತ್ತಕ್ಕೆ ಪದ್ಮಶ್ರೀ ಕಂಬೈನ್ಸ್ ಸಂಸ್ಥೆಯೊಂದಿದೆ ಒಪ್ಪಂದ ಮಾಡಿಕೊಂಡಿದ್ದರು. ಈ ಸಂಬಂಧ 2,13,000 ಹಣ ವಾಪಸ್ ಮಾಡಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿದ್ದರು ಎಂದು ಮುರಳಿಕೃಷ್ಣ ಎನ್ನುವವರು ದೂರು ನೀಡಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಶ್ರೀನಿವಾಸಮೂರ್ತಿ ಮತ್ತು ಇನ್ನೊಬ್ಬ ಆರೋಪಿಗೆ ಮೂರು ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿ ಇಬ್ಬರು ಮೇಲ್ಮನವಿ ಸಲ್ಲಿಸಿದ್ದರು.












Click it and Unblock the Notifications