ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿ ಹುಟ್ಟೂರಿನ ಸ್ವಾಮೀಜಿ ಹೇಳಿದ್ದ ಭವಿಷ್ಯ ನಿಜವಾಯಿತು!

By Srinath
|
Google Oneindia Kannada News

janardhan-reddy-arrest-swamiji-predicted
ಶ್ರೀಕಾಳಹಸ್ತಿ, ಸೆ.6: 'ಗಣಿಗಾರಿಕೆಯಲ್ಲಿ ತೊಡಗಿರುವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಪೊಲೀಸರು ಬಂಧಿಸುತ್ತಾರೆ' ಎಂದು ಸಮೀಪದ ಅಂಜಿಮೇಡು ಗ್ರಾಮದ ಖ್ಯಾತ ಸ್ವಾಮೀಜಿ ಸರಿಯಾಗಿ ಒಂದು ವರ್ಷದ ಹಿಂದೆ ಭವಿಷ್ಯ ನುಡಿದಿದ್ದರು!

ಒಂದು ವರ್ಷದೊಳಗಾಗಿ ಜನಾರ್ದನ ರೆಡ್ಡಿ ಬಂಧನವಾಗುತ್ತಾರೆ. ಆತನ ರಾಜಕೀಯ ಭವಿಷ್ಯ ಅವನತಿ ಕಾಣುತ್ತದೆ ಎಂದು ಶ್ರೀಕಾಳಹಸ್ತಿ ಯೆರಪೇಡು ಮಂಡಲ ವ್ಯಾಪ್ತಿಯಲ್ಲಿರುವ ಈ ಗ್ರಾಮದ ಸ್ವಾಮೀಜಿ ಅಂದೇ ನುಡಿದಿದ್ದರು.

ಅಷ್ಟಕ್ಕೂ ಈ ಸ್ವಾಮೀಜಿಯೇನೂ ಅವರಾಗಿ ಅವರೇ ಈ ಭವಿಷ್ಯ ಹೇಳಿರಲಿಲ್ಲ. ಇನ್ನೂ ಕುತೂಹಲದ ಸಂಗತಿಯೆಂದರೆ ನಮ್ಮ ಜನಾರ್ದನ ರೆಡ್ಡಿಗಾರು ಕರ್ನಾಟಕದ ಮುಖ್ಯಮಂತ್ರಿಯಾಗುವ ಯೋಗಾಯೋಗ ಇದೆಯಾ ಎಂದು ಕಾಳಹಸ್ತಿಯಲ್ಲಿರುವ ರೆಡ್ಡಿಯ ಆತ್ಮೀಯರು ರೆಡ್ಡಿ ರಾಕೆಟ್ ವೇಗದಲ್ಲಿ ಪ್ರವರ್ಧನಮಾನಕ್ಕೆ ಬರುತ್ತಿರುವುದನ್ನು ಕಂಡು ಕುತೂಹಲ ತಡೆಯದೆ ಸ್ವಾಮೀಜಿಯನ್ನು ಕೇಳಿದ್ದರು. ಮುಖದ ಮೇಲೆ ಹೊಡೆದಂತೆ ಆ ಸ್ವಾಮಿಜಿ 'ಲೇದು' ಎಂದು ಅಡ್ಡಡ್ಡ ತಲೆ ಆಡಿಸಿದ್ದರು!

English summary
Janardhan Reddy's arrest by CBI was predicted by a Swamiji in his native at Srikalahasti a year ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X