ಕುಟುಂಬ ಕಲಹ: ಎಚ್ಎಎಲ್ ಇಂಜಿನಿಯರ್ ಚೆನ್ನೈನಲ್ಲಿ ನೇಣಿಗೆ ಶರಣು

ಗೌರಿ ಶಂಕರ್ ಸಾವಿಗೆ ಕುಟುಂಬ ಕಲಹ ಕಾರಣ ಎನ್ನಲಾಗಿದೆ. ಚೆನ್ನೈನ ತಿರುವತ್ತಿಯೂರಿನಲ್ಲಿ ಗೌರಿಶಂಕರ್ ಕುಟುಂಬ ನೆಲೆಸಿದೆ. ಐದು ವರ್ಷಗಳಿಂದ ಬೆಂಗಳೂರಿನ ಎಚ್ಎಎಲ್ ಸಂಸ್ಥೆಯಲ್ಲಿ ಗ್ರೇಡ್ 4 ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಕಾವೇರಿ ಹಾಸ್ಟೆಲಿನ ರೂಂ ನಂಬರ್ 372ರಲ್ಲಿ ಬುಧವಾರ ಮಧ್ಯಾಹ್ನ 2.30ರಲ್ಲಿ ಗೌರಿ ಶಂಕರ್ ಮೃತದೇಹ ಪತ್ತೆಯಾಗಿದೆ. ಅವರ ಬಾಯಿಂದ ನೊರೆ ಬರುತ್ತಿತ್ತು ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮೃತನ ಲ್ಯಾಪ್ಟಾಪ್ ವಶಪಡಿಸಿಕೊಂಡಿದ್ದು, ಸೈಬರ್ ಕ್ರೈಂ ವಿಭಾಗಕ್ಕೆ ಹೆಚ್ಚಿನ ತನಿಖೆಗಾಗಿ ಕಳಿಸಿದ್ದಾರೆ.












Click it and Unblock the Notifications