ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷ ಸಂಧಾನಗಾರ್ತಿ ಕಿರಣ್ ಬೇಡಿ ಐಪಿಎಸ್

By Mahesh
|
Google Oneindia Kannada News

Kiran Bedi
ನವದೆಹಲಿ, ಆ.28: ಅಣ್ಣಾ ಹಜಾರೆ ಅವರ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಕರೆಗೆ ಓಗೊಟ್ಟು ಬೆಂಬಲವಾಗಿ ನಿಂತ ಭಾರತದ ಪ್ರಥಮ ಮಹಿಳಾ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಇಂದು ದಕ್ಷ ಸಂಧಾನಗಾರ್ತಿಯಾಗಿ ಹೊರಹೊಮ್ಮಿದ್ದಾರೆ.

80 ರ ದಶಕದಲ್ಲಿ ಪಾರ್ಕಿಂಗ್ ನಿಯಮ ಮುರಿದ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರಿಗೆ ನೋಟಿಸ್ ನೀಡಿದ್ದ ದಿಟ್ಟ ಐಪಿಎಸ್ ಅಧಿಕಾರಿ ಕಿರಣ್ ಬೇಡಿ.

ಪಂಜಾಬಿನ ಅಮೃತ್ ಸರ ಮೂಲದ 62 ವರ್ಷದ ಕಿರಣ್ ಬೇಡಿ ಅವರು, 2007ರಲ್ಲಿ ಸ್ವಯಂ ನಿವೃತ್ತಿ ಪಡೆದರೂ ಸುಮ್ಮನೆ ಕೂಡಲಿಲ್ಲ. ಸ್ಟಾರ್ ಟಿವಿಯಲ್ಲಿ ಆಪ್ ಕಿ ಕಚೇರಿ ಎಂಬ ಕಾರ್ಯಕ್ರಮದ ಮೂಲಕ ಜನ ಅದಾಲತ್ ನಡೆಸಿದರು. ಮಕ್ಕಳು ಹಾಗೂ ಖೈದಿಗಳ ಸುಧಾರಣೆಗಾಗಿ ಎರಡು ಎನ್ ಜಿಒಗಳನ್ನು ನಡೆಸುತ್ತಾ ಬಂದಿದ್ದಾರೆ.

ಇವರ ವೃತ್ತಿ ಹಾಗೂ ಸಾಮಾಜಿಕ ಕ್ರಾಂತಿಯನ್ನು ಗಮನಿಸಿ ಹತ್ತು ಹಲವು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿದೆ. ರಾಷ್ಟ್ರಪತಿಗಳ ಶೌರ್ಯ ಪ್ರಶತಿ, ವಿಶ್ವಸಂಸ್ಥೆ ಪ್ರಶಸ್ತಿ ಸೇರಿದಂತೆ ಅಪಾರ ಜನ ಪ್ರೀತ್ಯಾದರಗಳನ್ನು ಬೇಡಿ ಪಡೆದಿದ್ದಾರೆ.

ಅಣ್ಣಾ ಟೀಂ ಸೇರಿದ ಮೇಲೆ ಅರವಿಂದ ಕೆಜ್ರಿವಾಲ, ಭೂಷಣ್ ಅವರೊಡನೆ ಸಂಧಾನಕಾರರಾಗಿದ್ದಾರೆ. ಯುಪಿಎ ಸರ್ಕಾರದೊಡನೆ ದಿಟ್ಟವಾಗಿ ಸಂಧಾನ ಪ್ರಕ್ರಿಯೆಯನ್ನು ಜನ ಲೋಕಪಾಲ್ ಮಸೂದೆ ಬಗ್ಗೆ ಚರ್ಚಿಸಿದ್ದಾರೆ. ಅಣ್ಣಾ ಅವರ ಆಶಯವನ್ನು ಸರ್ಕಾರಕ್ಕೂ ಜನತೆಗೂ ಮನವರಿಕೆ ಮಾಡಿಕೊಡುವಲ್ಲಿ ಕಿರಣ್ ಬೇಡಿ ಪಾತ್ರ ಹಿರಿದು, ಥ್ಯಾಂಕ್ಸ್ ಮೇಡಂ

English summary
India's first female police officer Kiran Bedi is one of the successful negotiator with government on Jan Lokpal Bill. A great reformer of Tihar Jail and a strict officer turns for Anna's call to Secon freedom fight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X