ರೆಡ್ಡಿಗಳಿಗೆ ಸಂಪುಟ ಬಾಗಿಲು ಬಂದ್: ಎಜಿ ಆಚಾರ್ಯ ಸಲಹೆ

ಗಣಿ ಅಕ್ರಮದಲ್ಲಿ ಭಾಗಿಯಾದವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಸರಕಾರ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ರೆಡ್ಡಿ ಬ್ರದರ್ಸ್ ಮತ್ತು ಅವರ ಆಪ್ತ ಬಂಟ ಶ್ರೀರಾಮುಲು ಸಚಿವರಾದ ಬಳಿಕ ಅಧಿಕಾರ ದುರುಪಯೋಗಪಡಿಸಿಕೊಂಡು ಗಣಿ ಅಕ್ರಮ ನಡೆಸಿದ್ದಾರೆ.
ಗಣಿ ಮಾಲೀಕರಿಂದ ಸೇ. 40ರಷ್ಟು ಪಾಲು ಪಡೆದಿರುವುದು ಮತ್ತು ರಫ್ತು ವಹಿವಾಟು ನಡೆಸಿರುವ ಆರೋಪ ಅವರ ಮೇಲಿದೆ. ಹೀಗಾಗಿ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿದರೆ ಸರಕಾರದ ಅಸ್ತಿತ್ವಕ್ಕೆ ಅಪಾಯ ಎಂದು ಅಡ್ವೊಕೇಟ್ ಜನರಲ್ ಎಚ್ಚರಿಸಿದ್ದಾರೆ.
ಈ ಮಧ್ಯೆ ನೂತನ ಮುಖ್ಯಮಂತ್ರಿ ಸದಾನಂದ ಗೌಡರು ಅಡ್ವೊಕೇಟ್ ಜನರಲ್ ಅವರ ಸಲಹೆಯನ್ನು ಪಕ್ಷದ ವರಿಷ್ಠರ ಮುಂದಿಟ್ಟು ಅವರ ಮಾರ್ಗದರ್ಶನ ಕೋರಲಿದ್ದಾರೆ. ಅಂತಿಮವಾಗಿ ವರಿಷ್ಠರ ತೀರ್ಮಾನದ ಮೇಲೆ ರೆಡ್ಡಿ ಬ್ರದರ್ಸ್ ಸಂಪುಟ ಸೇರುವುದು ನಿರ್ಧಾರವಾಗಲಿದೆ.












Click it and Unblock the Notifications