ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಮೆಟ್ರೋ ಗೌರಿ ಹಬ್ಬಕ್ಕಲ್ಲ ದೀಪಾವಳಿಗೆ ಓಡುತ್ತೇ!

By Mahesh
|
Google Oneindia Kannada News

BMRCL Metro
ಬೆಂಗಳೂರು, ಆ.24: ನಮ್ಮ ಮೆಟ್ರೋ ರೈಲು ವಾಣಿಜ್ಯ ಓಡಾಟಕ್ಕೆ ಇನ್ನೂ ಮಹೂರ್ತ ಕೂಡಿ ಬಂದಿಲ್ಲ. ಗೌರಿ ಗಣೇಶ ಹಬ್ಬದ ಹೊತ್ತಿಗೆ ಮೆಟ್ರೋ ಉದ್ಘಾಟನೆಯಾಗಲಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ಮೆಟ್ರೋಗೆ ಹಸಿರು ನಿಶಾನೆ ತೋರಲಿದ್ದಾರೆ ಎಂಬ ಭರವಸೆ ಹುಸಿಯಾಗಿದೆ.

ಇನ್ನು 20-25 ದಿನಗಳಲ್ಲಿ ಮೊದಲ ಸಂಚಾರ ನಡೆಸಲು ಬಿಎಂಆರ್ ಸಿಎಲ್ ಮೆಟ್ರೋ ಅಧಿಕಾರಿಗಳು ಸಜ್ಜಾಗಿದ್ದಾರೆ. ಆದರೆ, ರೈಲ್ವೇ ಸುರಕ್ಷತಾ ಮಂಡಳಿಯಿಂದ ಇನ್ನೂ ಮಂಜೂರಾತಿ ಸಿಕ್ಕಿಲ್ಲ. ಈ ಅನುಮತಿ ಸಿಗುವ ತನಕ ಕಾಯಲೇಬೇಕು.

ನಂತರ ಪ್ರಧಾನಿ ಕಚೇರಿಗೆ ವಿಷಯ ತಿಳಿಸಿ ಮನಮೋಹನ್ ಸಿಂಗ್ ಅವರ ಬಿಡುವಿನ ವೇಳೆಯನ್ನು ತಿಳಿದು ಇಲ್ಲಿ ಮಹೂರ್ತ ಫಿಕ್ಸ್ ಮಾಡಬೇಕು. ಒಂದು ವೇಳೆ ಪ್ರಧಾನಿ ಸಿಂಗ್ ಅವರೇ ಮೆಟ್ರೋ ಉದ್ಘಾಟಿಸಬೇಕು ಎಂದು ರಾಜ್ಯ ಸರ್ಕಾರ ನಿರ್ಧರಿಸಿದರೆ ಇನ್ನೂ ವಿಳಂಬವಾಗುವ ಸಾಧ್ಯತೆಯಿದೆ.

2011ರ ಜೂನ್ ತಿಂಗಳೊಳಗೆ ಮೆಟ್ರೊ ಕಾಮಗಾರಿ ಮುಗಿಸಬೇಕಾಗಿತ್ತು. ಈಗ 2013ರ ಡಿಸೆಂಬರ್‌ವರೆಗೆ ವಿಸ್ತರಣೆಗೊಂಡಿದೆ. ಜೊತೆಗೆ ಮೆಟ್ರೋ ಯೋಜನೆ ವೆಚ್ಚ 11,609 ಕೋಟಿ ರುಪಾಯಿಗಳಿಗೆ ಏರಿಕೆ ಕಂಡಿದೆ.

ಮೆಟ್ರೋ ರೈಲು ಓಡಾಟದ ಮಹೂರ್ತದ ಬಗ್ಗೆ ತಲೆಕೆಡಿಸಿಕೊಳ್ಳದೆ, ಎರಡನೇ ಹಂತದ ಕಾಮಗಾರಿ ಪರಿಶೀಲನೆಯಲ್ಲಿ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಶಿವಶೈಲಂ ಬ್ಯುಸಿಯಾಗಿದ್ದಾರೆ

English summary
Karnataka Chief Minister DV Sadananda Gowda's promise of inaugurating BMRCL Metro train service in Bangalore by Gauri Ganesh Festival(or Sept second week) is seems to be not possible. Railway authority is yet to provide security tag to BMRCL. Moreover PM MM Singh is busy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X