ಪಾಯಸದ ಡಬ್ಬಿಯಲ್ಲಿ ಅನಂತ ಚಿನ್ನ ದೋಚಿದ ಮಾರ್ತಾಂಡ

ಆದರೆ ಇಷ್ಟು ವರ್ಷದದಿಂದ ಅನಂತ ಸಂಪತ್ತನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದಿದ್ದ ಮಾರ್ತಾಂಡ ವರ್ಮ ಪದ್ಮನಾಭ ಸ್ವಾಮಿಯ ಆಭರಣ ಕದಿಯುವ ಸಾಧ್ಯತೆಯಿಲ್ಲ. ಅಚ್ಚುತಾನಂದರ ಆರೋಪ ರಾಜಕೀಯ ಪ್ರೇರಿತ ಎಂದು ದೇವಸ್ಥಾನದ ಭಕ್ತಾದಿಗಳು ಕಿಡಿಕಾರಿದ್ದಾರೆ.
ದೇಗುಲಕ್ಕೆ ಪ್ರತಿದಿನ ಭೇಟಿ ನೀಡುವ ಮಾರ್ತಾಂಡ ವರ್ಮಾ ಬರುವಾಗ ಡಬ್ಬಿಯೊಂದನ್ನು ತರುತ್ತಿದ್ದರು. ಹೋಗುವಾಗ ಆ ಡಬ್ಬಿ ಕೊಂಡೊಯ್ಯುತ್ತಿದ್ದರು. ಅದರಲ್ಲಿ ಪಾಯಸ ಪ್ರಸಾದ ತೆಗೆದುಕೊಂಡು ಹೋಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ವಾಸ್ತವ ಸಂಗತಿ ಎಂದರೆ ಅವರು ಪ್ರತಿದಿನ ದೇಗುಲದಿಂದ ಅಪರೂಪದ ಆಭರಣಗಳನ್ನು ಕದ್ದೊಯ್ಯುತ್ತಿದ್ದರು ಎಂದು ಅಚ್ಚುತಾನಂದನ್ ಆರೋಪಿಸಿದ್ದಾರೆ.
ದೇಗುಲದ ಅರ್ಚಕರೊಬ್ಬರಿಗೆ ಮಾರ್ತಾಂಡ ವರ್ಮ ಅವರ ಈ ಕೆಲಸ ಗೊತ್ತಾದ ಮೇಲೆ ಅವರನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಕೆಲ ದಿನಗಳ ಅವರ ಜೀವಕ್ಕೂ ಭಯವಿತ್ತು. ಅವರೇ ನನಗೆ ಈ ವಿಷಯ ತಿಳಿಸಿದ್ದಾರೆ ಎಂದು ಮಾಜಿ ಸಿಎಂ ತಿಳಿಸಿದ್ದಾರೆ.
ಅಪಾರ ಸಂಪತ್ತು ಇದೆ ಎನ್ನಲಾದ ಬಿ ಉಗ್ರಾಣ ತೆರೆದರೆ, ಬಾಗಿಲು ತೆಗೆದವ ಹಾವು ಕಚ್ಚಿ ಸಾಯುತ್ತಾನೆ ಎಂದು ದೇವ ಪ್ರಶ್ನೆಯಿಂದ ತಿಳಿದುಬಂದಿರುವುದೆಲ್ಲ ಸುಳ್ಳು. ಸಂಪತ್ತನ್ನು ತಾವೇ ಕೊಳ್ಳೆ ಹೊಡೆಯುವ ದೃಷ್ಟಿಯಿಂದ ಇದನ್ನು ಮಾರ್ತಾಂಡ ವರ್ಮಾ ಅವರೇ ಹಬ್ಬಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಸುಪ್ರೀಂಕೋರ್ಟ್ನತ್ತ ಎಲ್ಲರ ಚಿತ್ತ: ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಅನಂತ ಸಂಪತ್ತು ಬಹಿರಂಗವಾದ ಬೆನ್ನಲ್ಲೇ ಇನ್ನೂ ತೆರೆಯದಿರುವ ನೆಲಮಾಳಿಗೆಯ ಬಿ ಉಗ್ರಾಣದ ಭವಿಷ್ಯ ಇದೀಗ ಸುಪ್ರೀಂ ಕೋರ್ಟ್ ಆಂಗಳದಲ್ಲಿದೆ. ಜನ ಕುತೂಹಲದಿಂದ ಸುಪ್ರೀಂಕೋರ್ಟ್ನತ್ತ ನೋಡುವಂತಾಗಿದೆ.
ಬಿ ಉಗ್ರಾಣವನ್ನು ಯಾವುದೇ ಕಾರಣಕ್ಕೂ ತೆರೆಯಬಾರದೆಂದು ದೇವ ಪ್ರಶ್ನೆಯಲ್ಲಿ ಪದ್ಮನಾಭ ದೇವರು ತೀರ್ಪು ನೀಡಿದ್ದಾನೆ. ಆನಂತಪದ್ಮನಾಭ ಸ್ವಾಮಿಯ ರಹಸ್ಯ ನಿಧಿಯನ್ನು ಮುಟ್ಟಿರುವುದ್ದರಿಂದ ಕ್ಷೇತ್ರ ಚೈತನ್ಯಕ್ಕೆ ಧಕ್ಕೆವುಂಟಾಗಿದೆ. ಮಾತ್ರವಲ್ಲ ದೇಶಕ್ಕೂ ಗಡಾಂತರ ಕಾದಿದೆ. ಇದಕ್ಕೆ ಶ್ರೀಘ್ರ ದೋಷ ಪರಿಹಾರ ಕ್ರಿಯೆ ಮಾಡಬೇಕು ಎಂಬುದು ಆಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿತ್ತು ಎನ್ನಲಾಗಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications