Get Updates
Get notified of breaking news, exclusive insights, and must-see stories!

ಮಲ್ಪೆ ಕಡಲ ತೀರದಲ್ಲಿ ಮಧ್ವಾಚಾರ್ಯರ ಪ್ರತಿಮೆ

CM DVS visit to Udupi
ಉಡುಪಿ,ಆ.21: ಉಡುಪಿ ಪ್ರವಾಸೋದ್ಯಮ ಇಲಾಖೆ ಮಲ್ಪೆ ಕಡಲ ತೀರದಲ್ಲಿ ಮಧ್ವಾಚಾರ್ಯರ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಿದೆ. ಇದರ ಶಂಕುಸ್ಥಾಪನೆ ಕಾರ್ಯವನ್ನು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಶನಿವಾರ ವಡಬಂಡೇಶ್ವರದಲ್ಲಿ ನೆರವೇರಿಸಿದರು.

ಉಡುಪಿಯಲ್ಲಿ ಧಾರ್ಮಿಕತೆ, ಸಾತ್ವಿಕತೆ ಬೇರೂರಲು ಮಧ್ವಾಚಾರ್ಯರು ನೀಡಿದ ಕೊಡುಗೆ ಅಪಾರ, 13ನೇ ಶತಮಾನದಲ್ಲಿ ಅವರು ನೀಡಿದ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಹೇಳಿದರು.

ಮಧ್ವಾಚಾರ್ಯರು ಶ್ರೀ ಕೃಷ್ಣನನ್ನು ಎತ್ತಿಕೊಂಡಿರುವ 35 ಅಡಿ ಎತ್ತರದ ಕಲ್ಲಿನ ಪ್ರತಿಮೆ ಇಲ್ಲಿ ನಿರ್ಮಾಣವಾಗಲಿದೆ. ಪ್ರವಾಸಿಗರು, ಯಾತ್ರಾರ್ಥಿಗಳ ಆಕರ್ಷಣೆಗಾಗಿ ಈ ಪ್ರತಿಮೆ ನಿರ್ಮಿಸಲು ಉದ್ದೇಶಿಸಲಾಗಿದೆ.

ಕರ್ನಾಟಕ ಸರ್ಕಾರವು 2009ನೇ ಸಾಲಿನಲ್ಲಿ ಈ ಯೋಜನೆಗೆ 30ಲಕ್ಷ ಬಿಡುಗಡೆಮಾಡಿದೆ. ಜಿಲ್ಲಾಡಳಿತ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಿದೆ ಎಂದು ಉಡುಪಿ ನಗರ ಪಾಲಿಕೆ ಅಧ್ಯಕ್ಷ ಗೋಕುಲ್ ದಾಸ್ ನಾಯಕ್ ಹೇಳಿದರು.

ಒಮ್ಮೆ ವಡಬಂಡೇಶ್ವರ ಸಮೀಪದಲ್ಲಿ ಧ್ಯಾನನಿರತರಾಗಿದ್ದ ಮಧ್ವಾಚಾರ್ಯರಿಗೆ ದೂರದಲ್ಲಿ ಬರುತ್ತಿದ್ದ ಹಡಗು ಮುಳುಗುತ್ತಿರುವ ಮುನ್ಸೂಚನೆ ಸಿಕ್ಕಿತಂತೆ. ಆ ಹಡಗಿನಲ್ಲಿ ಶ್ರೀ ಕೃಷ್ಣ ಹಾಗೂ ಬಲರಾಮರ ಪ್ರತಿಮೆಗಳಿದ್ದವಂತೆ. ತಕ್ಷಣ ತಮ್ಮ ಯೋಗ ಪ್ರಭಾವದಿಂದ ಹಡಗು ಮುಳುಗದಂತೆ ತಡೆದು ಪವಾಡ ಮೆರೆದರು ಎಂದು ಸಿಎಂ ಕಥೆ ಹೇಳಿ ಎಂದಿನಂತೆ ನಗೆ ಬೀರಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+