ಯಡ್ಡಿಗೆ ಜ್ಞಾನೋದಯ: ಲಂಚದ ವಿರುದ್ಧ ಬೀದಿಗಿಳಿದು ಪ್ರಯೋಜನವಿಲ್ಲ

ಜನ ಲೋಕಪಾಲ ಮಸೂದೆಗೆ ಒತ್ತಾಯಿಸಿ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟ ಯಶಸ್ವಿಯಾಗಲು ಬೀದಿಗಿಳಿದರೆ ಪ್ರಯೋಜನವಿಲ್ಲ ಎಂದು 'ಅಣ್ಣ' ಯಡಿಯೂರಪ್ಪ ಶುಕ್ರವಾರ ಹೇಳಿದ್ದಾರೆ. ಲೋಕಸಭೆಯಲ್ಲಿ ಜನ ಲೋಕಪಾಲ ಮಸೂದೆ ಬಗ್ಗೆ ಚರ್ಚೆ ನಡೆಸಿ ಒಮ್ಮತದ ನಿರ್ಣಯ ಕೈಗೊಂಡರೆ ಮಾತ್ರ ಸಮಸ್ಯೆ ಬಗೆಹರಿಯಬಹುದು.
ಸಂಸತ್ತಿನಲ್ಲಿ ಮಾತ್ರ ಇದಕ್ಕೆ ಉತ್ತರ ದೊರೆಯಲು ಸಾಧ್ಯವೆಂದು ಅಣ್ಣ ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ. ಕೇವಲ ಉಪವಾಸ ಸತ್ಯಾಗ್ರಹ ಮಾಡಿದರೆ ಹಜಾರೆಯವರ ಆರೋಗ್ಯ ಕೆಡುತ್ತದೆ ಎಂದೂ ಯಡಿಯೂರಪ್ಪ ಅಣ್ಣಾ ಬಗ್ಗೆ ಸಾಂತ್ವನದ ಮಾತುಗಳನ್ನು ಆಡಿದ್ದಾರೆ.
ಅಣ್ಣ ಯಡ್ಡಿಯ ಈ ಹೊಸ ವರಸೆ ಬಿಜೆಪಿ ವರಿಷ್ಠರನ್ನು ಇರುಸುಮುರುಸಿಗೆ ಸಿಲುಕಿಸಿದೆ. ಇವಯ್ಯ ಮೊನ್ನೆಯಷ್ಟೇ ಅಣ್ಣಾಗೆ ಬೆಂಬಲ ಸೂಚಿಸಿ, ಗಾಂಧಿ ಪ್ರತಿಮೆ ಎದುರು ಧರಣಿ ನಡೆಸ್ತೀನಿ ಎಂದಿದ್ದ. ಈ ಮಧ್ಯೆ, 'ಛುಪ್' ಎಂದು ಗದರಿಕೊಂಡಿದ್ದಕ್ಕೆ ಸುಮ್ಮನಾಗಿದ್ದ ಇವಯ್ಯ ಇದೇನಿದು ಅಣ್ಣಾ ವಿಷಯದಲ್ಲಿ ಪಕ್ಷ ವಿರೋಧಿ ಹೇಳಿಕೆ ನೀಡುತ್ತಿದ್ದಾನೆ ಎಂದು ವರಿಷ್ಠರು ತಲೆ ಚಚ್ಚಿಕೊಳ್ಳುತ್ತಿದ್ದಾರಂತೆ.












Click it and Unblock the Notifications