ಡಿವಿ ಸದಾನಂದ ಗೌಡ ಸಂಪುಟ ಸಚಿವರ ಖಾತೆ ವಿವರ

Karnataka Cabinet Ministers portfolio
ಬೆಂಗಳೂರು ಆ.8: ಕರ್ನಾಟಕ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಸಂಪುಟ ಪುನಾರಚನೆ ಮಾಡಿದ್ದಾರೆ, ಮೊದಲ ಹಂತದಲ್ಲಿ 21 ಜನ ಶಾಸಕರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಆ.9ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಯಡಿಯೂರಪ್ಪ ಬಣದಿಂದ 12 ಜನ ಹಾಗೂ ಶೆಟ್ಟರ್ ಬಣದಿಂದ 9 ಜನ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಎಲ್ಲಾ ಸಚಿವರು ಯಡಿಯೂರಪ್ಪ ಸರ್ಕಾರದಲ್ಲಿ ತಾವು ನಿರ್ವಹಿಸಿದ್ದ ಖಾತೆಯನ್ನೇ ಮುಂದುವರೆಸಿಕೊಂಡು ಹೋಗಲಿದ್ದಾರೆ. ಲೋಕಾಯುಕ್ತ ಗಣಿವರದಿಯಲ್ಲಿ ರೆಡ್ಡಿ ಸೋದರರ ಹೆಸರು ಪ್ರಸ್ತಾಪವಾಗಿರುವುದರಿಂದ ಮೊದಲ ಹಂತದಲ್ಲಿ ಅವರನ್ನು ಕ್ಯಾಬಿನೆಟ್ ಗೆ ಸೇರಿಸಿಕೊಂಡಿಲ್ಲ. [21ನೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಚಿವ ಸಂಪುಟ ವಿವರ]

ಎರಡನೇ ಹಂತದ ವಿಸ್ತರಣೆಯಲ್ಲಿ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ, ಆನಂದ್ ಆಸ್ನೋಟಿಕರ್, ಸಿ.ಪಿ ಯೋಗೀಶ್ವರ್, ನರಸಿಂಹ ನಾಯಕ(ರಾಜೂ ಗೌಡ) ಹಾಗೂ ವರ್ತೂರು ಪ್ರಕಾಶ್ ಅವರು ಸಂಪುಟ ದರ್ಜೆ ಸಚಿವರಾಗಿ ಆ.11ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕ್ಯಾಬಿನೆಟ್ ಸಚಿವರು ಅವರ ಕ್ಷೇತ್ರ ಹಾಗೂ ಖಾತೆ ವಿವರ ಹೀಗಿದೆ:

ಸಚಿವರ ಹೆಸರು ಕ್ಷೇತ್ರ ಖಾತೆ
ಡಿ.ವಿ. ಸದಾನಂದ ಗೌಡ -
ಸಂಸದೀಯ ವ್ಯವಹಾರ, ಹಣಕಾಸು, ಬಿಡಬ್ಲ್ಯೂಎಸ್ ಎಸ್ ಬಿ, ಗುಪ್ತಚರ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಗಣಿಗಾರಿಕೆ, ಅಲ್ಪಸಂಖ್ಯಾತರ ಕಲ್ಯಾಣ, ಅರೋಗ್ಯ, ಅರಣ್ಯ, ಬಾಕಿ ಉಳಿದ ಎಲ್ಲಾ ಖಾತೆಗಳು
ಗೋವಿಂದ ಕಾರಜೋಳ ಮುಧೋಳ ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ, ಜವಳಿ
ವಿ.ಎಸ್. ಆಚಾರ್ಯ ವಿಧಾನಪರಿಷತ್ ಸದಸ್ಯ ಉನ್ನತ ಶಿಕ್ಷಣ, ಮುಜರಾಯಿ, ಐಟಿ ಬಿಟಿ, ಯೋಜನಾ ಆಯೋಗ
ಉದಾಸಿ ಚನ್ನಬಸಪ್ಪ ಮಹಾಲಿಂಗಪ್ಪ ಹಾನಗಲ್ PWD, ಬಂದರು ಖಾತೆ ಹೊರತು ಪಡಿಸಿ
ಜಗದೀಶ್ ಶೆಟ್ಟರ್ ಹುಬ್ಬಳ್ಳಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಗ್ರಾಮೀಣ ನೀರು ಪೂರೈಕೆ
ಆರ್ ಅಶೋಕ್ ಪದ್ಮನಾಭ ನಗರ ಗೃಹ(ಗುಪ್ತಚರ, ಬಂದೀಖಾನೆ ಹೊರತುಪಡಿಸಿ), ಸಾರಿಗೆ
ನಾರಾಯಣಸ್ವಾಮಿ ಆನೇಕಲ್ ಅಲ್ಪಸಂಖ್ಯಾತ ಸಮಾಜ ಕಲ್ಯಾಣ, ಬಂದೀಖಾನೆ
ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿ ಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಗ್ರಂಥಾಲಯ ಹೊರತು ಪಡಿಸಿ
ಬಿಎನ್ ಬಚ್ಚೇಗೌಡ ಹೊಸಕೋಟೆ ಕಾರ್ಮಿಕ ಖಾತೆ, ರೇಷ್ಮೆ
ಸುರೇಶ್ ಕುಮಾರ್ ರಾಜಾಜಿನಗರ ಕಾನೂನು
ಎಸ್ ಎ ರವೀಂದ್ರನಾಥ್ ದಾವಣಗೆರೆ ಉತ್ತರ ಸಕ್ಕರೆ, ತೋಟಗಾರಿಕೆ ಹಾಗೂ ಕೃಷಿ
ಎಸ್ ಎ ರಾಮದಾಸ್ (ಮೈಸೂರು ವೈದ್ಯಕೀಯ ಶಿಕ್ಷಣ(ಆರೋಗ್ಯ ಖಾತೆಯಿಂದ)
ಮುರುಗೇಶ್ ನಿರಾಣಿ ಬಿಳಗಿ ಮಧ್ಯಮ ಹಾಗೂ ಭಾರಿ ಕೈಗರಿಕಾ
ಶೋಭಾ ಕರಂದ್ಲಾಜೆ ಯಶವಂತಪುರ ಇಂಧನ, ಆಹಾರ ಮತ್ತು ನಾಗರಿಕ ಸೌಲಭ್ಯ ಪೂರೈಕೆ
ಉಮೇಶ್ ಕತ್ತಿ ಚಿಕ್ಕೋಡಿ ಕೃಷಿ
ರೇಣುಕಾಚಾರ್ಯ ಹೊನ್ನಾಳಿ ಅಬಕಾರಿ
ಬಸವರಾಜ್ ಬೊಮ್ಮಾಯಿ ಹಾವೇರಿ ನೀರಾವರಿ
ರೇವೂನಾಯಕ್ ಬೆಳಮಗಿ ಗುಲಬರ್ಗ ಗ್ರಾಮೀಣ ಗ್ರಂಥಾಲಯ, ಸಣ್ಣ ಉಳಿತಾಯ, ಹೈನುಗಾರಿಕೆ
ಸಿಸಿ ಪಾಟೀಲ್ ನರಗುಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಲಕ್ಷ್ಮಣ್ ಸವದಿ ಅಥಣಿ ಸಹಕಾರಿ ಖಾತೆ
ಕೃಷ್ಣ ಪಾಲೇಮಾರ್ ಮಂಗಳೂರು ಉತ್ತರ ಬಂದರು, ಮೀನುಗಾರಿಕೆ, ಪರಿಸರ,ವಿಜ್ಞಾನ
ವಿ ಸೋಮಣ್ಣ ವಿಧಾನಪರಿಷತ್ ಸದಸ್ಯ ವಸತಿ
ಬಾಲಚಂದ ಜಾರಕಿಹೊಳಿ ಅರಬಾವಿ ಪೌರಾಡಳಿತ
ಆನಂದ್ ಆಸ್ನೋಟಿಕರ್ ಕಾರವಾರ ಮೀನುಗಾರಿಕೆ, ಐಟಿಬಿಟಿ, ವಿಜ್ಞಾನ ತಂತ್ರಜ್ಞಾನ
ಸಿ.ಪಿ ಯೋಗೀಶ್ವರ್ ಚನ್ನಪಟ್ಟಣ ಅರಣ್ಯ
ನರಸಿಂಹ ನಾಯಕ(ರಾಜೂ ಗೌಡ) ಸುರಪುರ ಸಣ್ಣ ಕೈಗಾರಿಕೆ
ವರ್ತೂರು ಪ್ರಕಾಶ್ ಕೋಲಾರ ಜವಳಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+